ಕಿರುಕುಳ ಉದ್ದೇಶಪೂರ್ವಕ ಆಗಿರಲಿಲ್ಲ ಎಂದ ಆರೋಪಿ
Team Udayavani, Dec 12, 2017, 7:35 AM IST
ಮುಂಬಯಿ: “ದಂಗಲ್’ ಖ್ಯಾತಿಯ ನಟಿ ಜೈರಾ ವಾಸಿಂ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮುಂಬಯಿಯ ಉದ್ಯಮಿ, ವಿಕಾಸ್ ಸಚ್ದೇವ ಎಂಬಾತ ಪೊಲೀಸರ ಮುಂದೆ ತಾನು ಉದ್ದೇಶ ಪೂರ್ವಕವಾಗಿ ಕುಕೃತ್ಯ ನಡೆಸಿಲ್ಲವೆಂದು ತಿಳಿಸಿದ್ದಾನೆಂದು ಮೂಲಗಳು ಹೇಳಿವೆ.
ಶನಿವಾರ, ದಿಲ್ಲಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿಕೊಂಡು ತಾವು ಮುಂಬಯಿಗೆ ವಾಪಸ್ಸಾಗುತ್ತಿದ್ದುದಾಗಿ ತಿಳಿಸಿರುವ ವಿಕಾಸ್, ಪ್ರಯಾಣದ ವೇಳೆ ತಾವು ದೈಹಿಕವಾಗಿ, ಮಾನಸಿಕವಾಗಿ ತೀವ್ರ ಬಳಲಿದ್ದು, ತಮಗೆ ಅರಿವಿಲ್ಲದೆ ಮುಂದಿನ ಆಸನಕ್ಕೆ ಕಾಲು ಚಾಚಿರಬ ಹುದು. ಆದರೆ, ಉದ್ದೇಶಪೂರ್ವಕವಾಗಿ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದಿದ್ದಾನೆ. ವಿಕಾಸ್ ಪತ್ನಿ ಸಹ ಹೇಳಿಕೆ ನೀಡಿದ್ದು, “”ನನ್ನ ಪತಿ ಅಂಥ ವ್ಯಕ್ತಿತ್ವದವರಲ್ಲ. ಅವರಿಗೆ ಅರಿವಿಲ್ಲದಂತೆ ಕಾಲು ತಾಗಿರಬಹುದು. ಆದರೆ, ಜೈರಾ ಅದನ್ನು ತಪ್ಪಾಗಿ ಅರ್ಥೈಸಿರಬೇಕು” ಎಂದಿದ್ದಾರೆ.