ಯುಪಿ ಅಸೆಂಬ್ಲಿಗೆ ಕೈಕೈ ಹಿಡಿದು ಬಂದ ಯೋಗಿ, ಆಜಂ ಖಾನ್, Watch
Team Udayavani, Dec 15, 2017, 4:23 PM IST
ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಿನ್ನೆ ಗುರುವಾರದ ಮೊದಲ ದಿನದ ಕಲಾಪ ಅತ್ಯಪರೂಪದ ಸ್ನೇಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ರಾಜಕೀಯ ರಂಗದಲ್ಲಿ ಹಾವು – ಮುಂಗುಸಿ ಎಂಬಂತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ವಿವಾದಿತ ನಾಯಕ ಆಜಂ ಖಾನ್ ಕೈ ಕೈ ಹಿಡಿದುಕೊಂಡು, ಬಹುಕಾಲದ ಅಪ್ಪಟ ಸ್ನೇಹಿತರಂತೆ ವಿಧಾನಸಭೆ ಕಾರಿಡಾರ್ಗೆ ನಡೆದು ಬಂದರು.
ಸದಾ ಪರಸ್ಪರ ವಾಕ್ ಸಮರದಲ್ಲೇ ನಿರತರಾಗುವ ಈ ಇಬ್ಬರು ನಾಯಕರು ಕೈ ಕೈ ಹಿಡಿದುಕೊಂಡು ವಿಧಾನಸಭೆ ಕಾರಿಡಾರ್ಗೆ ನಡೆದುಕೊಂಡು ಬರುತ್ತಿರುವುದನ್ನು ಕಂಡು ಚಕಿತರಾದ ಮಾಧ್ಯಮ ಮಂದಿ ಒಡನೆಯೇ ಈ ನಾಯಕರಿಂದ ಅಪರೂಪದ ಪೋಸ್ ಪಡೆದುಕೊಂಡು ತಮ್ಮ ಕ್ಯಾಮೆರಾದಲ್ಲಿ “ಸಾರ್ವಕಾಲಿಕ ದಾಖಲೆ” ಗಾಗಿ ಕ್ಲಿಕ್ಕಿಸಿಸಿಕೊಂಡರು.
ಸಿಎಂ ಯೋಗಿ ಆದಿತ್ಯನಾಥ್ ಮತ್ತು ಆಜಂ ಖಾನ್ ಬಹುತೇಕ ಒಂದೇ ಹೊತ್ತಿನಲ್ಲಿ ವಿಧಾನಸಭೆಯ ಕಾರಿಡಾರ್ ಪ್ರವೇಶಿಸಿದಾಗ ಉಭಯತರು ಪರಸ್ಪರರನ್ನು ಅಭಿನಂದಿಸಿ ಕೈಕೈ ಹಿಡಿದುಕೊಂಡು ಕಾರಿಡಾರ್ ಪ್ರವೇಶಿಸಿದರು.
ಈ ಹಿಂದೆ ಯೋಗಿ ಆದಿತ್ಯನಾಥ್ ಅವರು “ನಮಾಜ್ ಮತ್ತು ಸೂರ್ಯ ನಮಸ್ಕಾರ ಒಂದೇ’ ಎಂದು ಹೇಳಿದ್ದರು; ಅದಕ್ಕೆ ಉತ್ತರವಾಗಿ ಆಜಂ ಖಾನ್, “ಹಾಗಿದ್ದರೆ ನೀವು ಸೂರ್ಯ ನಮಸ್ಕಾರಕ್ಕೆ ಬದಲಾಗಿ ನಮಾಜ್ ಮಾಡಲು ಬಯಸುವಿರಾ?’ ಎಂದು ವ್ಯಂಗ್ಯವಾಡಿದ್ದರು. ಮಾತ್ರವಲ್ಲದೆ ನಮಾಜ್ ಮಾಡುವುದಕ್ಕೆ ಆದಿತ್ಯನಾಥ್ ಅವರನ್ನು ಯಾರೂ ನಿರ್ಬಂಧಿಸುವುದಿಲ್ಲ’ ಎಂದೂ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ