ಗಾಜಿನ ಪರದೆ, ಇಂಟರ್ ಕಾಮ್ ಮಾತು: ಜಾಧವ್, ತಾಯಿ, ಪತ್ನಿ ಭೇಟಿ
Team Udayavani, Dec 25, 2017, 4:45 PM IST
ಹೊಸದಿಲ್ಲಿ : ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲ್ಪಟ್ಟು ಮರಣದಂಡನೆಗೆ ಗುರಿಯಾಗಿ ಸದ್ಯ ಪಾಕ್ ಜೈಲಿನಲ್ಲಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ ಅವರನ್ನು ಇಸ್ಲಾಮಾಬಾದ್ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇಂದು ಸೋಮವಾರ ಅವರ ತಾಯಿ ಮತ್ತು ಪತ್ನಿ ‘ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆ’ಯೊಂದರಲ್ಲಿ ಭೇಟಿಯಾದರು. ಈ ಭೇಟಿಗಾಗಿ ಪಾಕ್ ಸರಕಾರ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ಕಾನ್ಸುಲರ್ ಸಂಪರ್ಕಾವಕಾಶ ಕಲ್ಪಿಸಿತ್ತು.
ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಯಲ್ಲಿ ಇಂಟರ್ ಕಾಮ್ ವ್ಯವಸ್ಥೆಯೊಂದಿಗೆ ಏರ್ಪಡಿಸಲಾದ ಈ ಭೇಟಿಯಲ್ಲಿ ತಾಯಿ ಮತ್ತು ಪತ್ನಿ ಜಾಧವ್ ಅವರೊಂದಿಗೆ ಅರ್ಧ ತಾಸನ್ನು ಕಳೆದರು.
#WATCH: Wife, mother of Kulbhushan Jadhav reach Pakistan Foreign Affairs Ministry in Islamabad along with JP Singh, Deputy High Commissioner pic.twitter.com/Dnp9eUc5je
— ANI (@ANI) December 25, 2017
ಈ ಭೇಟಿಗೆ ಮುನ್ನ ಇಸ್ಲಾಮಾಬಾದ್ ಮಾಧ್ಯಮ ವರದಿಗಳಲ್ಲಿ ಕಾನ್ಸುಲರ್ ಸಂಪರ್ಕಾವಕಾಶವನ್ನು ಪಾಕ್ ಸರಕಾರ ನೀಡುವ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು; ಹಾಗಾಗಿ ಈ ಭೇಟಿ ನಡೆಯುವುದೇ ಇಲ್ಲವೇ ಎಂಬ ಬಗ್ಗೆ ಕೊನೇ ಕ್ಷಣದ ವರೆಗೂ ಗುಮಾನಿ ಇತ್ತು.
ಕಾನ್ಸುಲರ್ ಸಂಪರ್ಕಾವಕಾಶ ಕಲ್ಪಿಸಿದ ಹೊರತಾಗಿಯೂ ಗಾಜಿನ ಪರದೆಯ ಮೂಲಕವೇ ಜಾಧವ್ ಅವರೊಂದಿಗೆ ಅವರ ತಾಯಿ, ಪತ್ನಿ ಇಂಟರ್ ಕಾಮ್ ಮೂಲಕ ಮಾತನಾಡಬೇಕಾಯಿತು. ಯಾವುದೇ ರೀತಿಯ ದೈಹಿಕ ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡದಿರುವುದೇ ಗಾಜಿನ ಪಾರ್ಟಿಶನ್ ಉದ್ದೇಶವಾಗಿದ್ದುದು ಸ್ಪಷ್ಟವಾಗಿತ್ತು.
ತಾಯಿ, ಪತ್ನಿ ಜತೆಗೆ ಜಾಧವ್ ಇಂಟರ್ ಕಾಮ್ ಫೋನ್ ಮೂಲಕ ಮಾತನಾಡುವ ಚಿತ್ರವನ್ನು ಪಾಕ್ ಸರಕಾರ ಬಿಡುಗಡೆಗೊಳಿಸಿದ್ದು ಅದರಲ್ಲಿ ಜಾಧವ್ ಸೂಟ್ಧಾರಿಯಾಗಿ ಕಂಡು ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..