ಪಾಕ್ ಅಪ್ರಚೋದಿ ದಾಳಿ: ಭಾರತೀಯ ಸೇನಾ ಜವಾನ ಹುತಾತ್ಮ
Team Udayavani, Jan 13, 2018, 7:06 PM IST
ಜಮ್ಮು : ಕಾಶ್ಮೀರದ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ಇಂದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಸೇನಾ ಜವಾನ ಮೃತಪಟ್ಟನೆಂದು ಸೇನೆ ತಿಳಿಸಿದೆ.
ಪಾಕಿಸ್ಥಾನದ ಈ ದಾಳಿಗೆ ಭಾರತೀಯ ಪಡೆಗಳು ಅತ್ಯಂತ ಬಲಿಷ್ಠ ಹಾಗೂ ಪರಿಣಾಮಕಾರಿ ಮರು ದಾಳಿಯ ಸಂಘಟಿಸಿಪಾಕಿಗೆ ಪ್ರಬಲ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ವಕ್ತಾರ ತಿಳಿಸಿದ್ದಾರೆ. ಸುಂದರ್ಬನಿ ವಲಯದಲ್ಲಿ ಭಾರತೀಯ ಸೇನಾ ಹೊರಠಾಣೆಗಳನ್ನು ಗುರಿ ಇರಿಸಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.
ಹುತಾತ್ಮರಾಗಿರುವ ಲ್ಯಾನ್ಸ್ ನಾಯಕ್ ಯೋಗೇಶ್ ಮುರಲೀಧರ್ ಭದಾನೆ (22) ಅವರು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಖಲಾಣೆ ಗ್ರಾಮದವರು. ಪಾಕ್ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರು ಅನಂತರ ಕೊನೆಯುಸಿರೆಳೆದರು. ಭದಾನೆ ಅವರು ಪತ್ನಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ