ಮಹಿಳೆಯ ಮೇಲೆ ಅಮಾನುಷ ಅತ್ಯಾಚಾರ, ಗುಪ್ತಾಂಗಕ್ಕೆ ಲೋಹದ ವಸ್ತು
Team Udayavani, Feb 20, 2018, 4:47 PM IST
ಕೋಲ್ಕತ : ಪಶ್ಚಿಮ ಬಂಗಾಲದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಮಾನುಷ ಅತ್ಯಾಚಾರ ನಡೆಸಲಾಗಿದ್ದು ಅತ್ಯಾಚಾರಿಗಳು ಆಕೆಯ ಗುಪ್ತಾಂಗಕ್ಕೆ ಲೋಹದ ವಸ್ತು ತುರುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ದಿನಾಜ್ಪುರದ ಗ್ರಾಮವೊಂದರ ಸೇತುವೆಯ ಕೆಳಗೆ ಅತ್ಯಾಚಾರಕ್ಕೆ ಗುರಿಯಾದ ಸುಮಾರು 19 – 20ರ ಹರೆಯದ ಮಹಿಳೆಯು ಸುಮಾರು 18 ತಾಸುಗಳ ಕಾಲ ಪ್ರಜ್ಞಾಹೀನಳಾಗಿ ಬಿದ್ದಿದ್ದಳು.
ಫೆ.18ರ ಮಧ್ಯಾಹ್ನ ದಾರಿಹೋಕನೋರ್ವ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ. ಆಕೆಯ ಕರುಳು ಗುಪ್ತಾಂಗದಿಂದ ಹೊರಬಂದಿತ್ತು. ಮಾಲ್ಡಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಕೆಗೆ ಎರಡು ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ.
ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯು ದೇಹಾಬಂದ್ ನಿವಾಸಿಯಾಗಿದ್ದಾಳೆ. ಫೆ.17ರಂದು ಆಕೆಯ ಮೇಲೆ ಹಲ್ಲೆ, ಅತ್ಯಾಚಾರ ನಡೆದಿದೆ.
ಮಹಿಳೆಯು ಹೇಳಿರುವ ಪ್ರಕಾರ ಆಕೆಯನ್ನು ದೇಹಾಬಂದ್ ಗ್ರಾಮದ ನಿವಾಸಿಯಾಗಿರುವ ರಾಮ್ ಪ್ರಬೇಶ್ ಶರ್ಮಾ ಮತ್ತು ಇತರ ಕೆಲವರು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾರೆ; ಬಳಿಕ ಆಕೆಯ ಮೇಲೆ ಅತ್ಯಂತ ಅಮಾನುಷವಾಗಿ ಲೋಹದ ವಸ್ತುವಿನಿಂದ ಗಾಯಮಾಡಿದ್ದಾರೆ.
ಈ ಅಮಾನುಷ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಕಾರ್ಯಕರ್ತೆಯರು, ಅತ್ಯಾಚಾರಿಗಳಿಗೆ ಕಠಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್