ಕ್ಷುಲ್ಲಕ ಜಗಳ : 25ರ ವ್ಯಕ್ತಿಗೆ 58 ಬಾರಿ ಇರಿದ ದುಷ್ಕರ್ಮಿಗಳು
Team Udayavani, Mar 2, 2018, 11:54 AM IST
ಹೊಸದಿಲ್ಲಿ : ದಿಲ್ಲಿಯ ಖಾನಾಪುರ ಪ್ರದೇಶದಲ್ಲಿ ನಿನ್ನೆ ಗುರುವಾರ ಸಂಜೆ 25ರ ಹರೆಯದ ವ್ಯಕ್ತಿಯೊಬ್ಬನನ್ನು ಬೈಕರ್ಗಳ ಗ್ಯಾಂಗ್ ಒಂದು 50 ಬಾರಿ ಮಾರಣಾಂತಿಕವಾಗಿ ಇರಿದ ಘಟನೆ ನಡೆದಿದೆ.
ತೀವ್ರ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಗೆ ಕನಿಷ್ಠ 50 ಇರಿತಗಳಾಗಿರುವುದನ್ನು ವೈದ್ಯರು ದೃಢೀಕರಿಸಿದ್ದಾರೆ. ಹಲ್ಲೆ ಘಟನೆ ನಡೆಯುತ್ತಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ ಅವರು ಅರ್ಧ ತಾಸಿನ ಬಳಿಕವಷ್ಟೇ ಸ್ಥಳಕ್ಕೆ ಬಂದಿದ್ದಾರೆ. ಆಶಿಶ್ನ ಸ್ಥಿತಿ ಗಂಭೀರವಿದೆ ಎಂದು ತಿಳಿದುಬಂದಿದೆ.
ಮಾರಣಾಂತಿಕ ಇರಿತಕ್ಕೆ ಗುರಿಯಾದ ವ್ಯಕ್ತಿಯನ್ನು ಆಶಿಶ್ ಎಂದು ಗುರುತಿಸಲಾಗಿದೆ. ಆತ ಜಿಮ್ನಿಂದ ಮರಳುತ್ತಿದ್ದಾಗ ಬೈಕರ್ಗಳ ಗ್ಯಾಂಗ್ ಆತನನ್ನು ತಡೆದು 50 ಬಾರಿ ಇರಿಯಿತು. ಈ ಇಡಿಯ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಅದನ್ನು ವೀಕ್ಷಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಶಿಶ್ ಮೇಲೆ ಬೈಕರ್ ಗ್ಯಾಂಗ್ ಹಲ್ಲೆ ನಡೆಸಲು ಕಾರಣವೇನು ಎಂಬುದು ಖಚಿತವಾಗಿ ಗೊತ್ತಾಗಿಲ್ಲ.
ಆದರೆ ಸ್ಥಳೀಯರು ಹೇಳಿರುವ ಪ್ರಕಾರ ಆಶಿಶ್ ಹಿಂದಿನ ದಿನ, ಹೋಳಿ ಹಬ್ಬಕ್ಕೆ ಮುನ್ನ, ನೀರಿನ ಬಲೂನ್ ಎಸೆದಿದ್ದ ಬಾಲಕನ ಮೇಲೆ ಕೆಲವು ವ್ಯಕ್ತಿಗಳು ಯದ್ದಾತದ್ವಾ ಹಲ್ಲೆ ನಡೆಸುತ್ತಿದ್ದುದನ್ನು ಕಂಡು ತಡೆದಿದ್ದ; ಇದೇ ಕಾರಣಕ್ಕೆ ಬೈಕರ್ಗಳ ಗ್ಯಾಂಗ್ ಆಶಿಶ್ ವಿರುದ್ಧ ಸೇಡು ತೀರಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ