ಧರ್ಮನಿಷ್ಠ ಹಿಂದುವಾಗಿರುವ ನಾನು ಈದ್ ಆಚರಿಸುವುದಿಲ್ಲ
Team Udayavani, Mar 7, 2018, 1:52 PM IST
ಲಕ್ನೋ: ಹೋಳಿ ಮೆರವಣಿಗೆಗಾಗಿ ಉತ್ತರಪ್ರದೇಶದಲ್ಲಿ ನಮಾಜ್ ಸಮಯ ಬದಲಾವಣೆ ಮಾಡಿರುವ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ನಾನೊಬ್ಬ ಧರ್ಮ ನಿಷ್ಠ ಹಿಂದುವಾಗಿದ್ದು ಈದ್ ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಎಸ್ಪಿಯನ್ನು ಗುರಿಯಾರಿಸಿಕೊಂಡು ವಾಗ್ದಾಳಿ ನಡೆಸಿದ ಯೋಗಿ ‘ನನ್ನ ಧರ್ಮದ ಮೇಲೆ ನಂಬಿಕೆ ಇರುವಾಗ ನಾನ್ಯಾಕೆ ಈದ್ ಆಚರಿಸಬೇಕು. ನಾನು ಜನಿವಾರ ಧಾರಿಯೂ ಅಲ್ಲ, ಟೋಪಿ ಧರಿಸುವವನೂ ಅಲ್ಲ’ ಎಂದಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಗೆಲುವನ್ನು ಉಲ್ಲೇಖ ಮಾಡಿ ಎಸ್ಪಿ ಗೆ ತಿರುಗೇಟು ನೀಡಿದ ಯೋಗಿ ‘ಕೆಂಪು ಧ್ವಜಗಳನ್ನು ಕೆಳಗಿಳಿಸಲಾಗಿದೆ. ಕೆಂಪು ಟೋಪಿಗಳನ್ನೂ ಕೆಳಗಿಳಿಸಲಾಗಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA