ಹಾಲು ಕಲಬೆರಕೆ ಜಾಮೀನು ರಹಿತ ಅಪರಾಧವಾಗಲಿದೆ !
Team Udayavani, Mar 14, 2018, 3:02 PM IST
ಮುಂಬಯಿ: ರಾಜ್ಯದಲ್ಲಿ ಇನ್ನು ಹಾಲು ಕಲಬೆರಕೆ ಮಾಡಿದರೆ, ದೀರ್ಘಕಾಲದ ವರೆಗೆ ಜೈಲಿನಲ್ಲಿ ಉಳಿಯಬೇಕಾಗುತ್ತದೆ! ಜೀವಕ್ಕೆ ಮಾರಕವಾಗಿರುವ ಹಾಲು ಕಲಬೆರಕೆ ಪ್ರವೃತ್ತಿ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮುಂದಾ ಗಿರುವ ಮಹಾರಾಷ್ಟ್ರ ಸರಕಾರವು, ರಾಜ್ಯದಲ್ಲಿ ಹಾಲು ಕಲಬೆರಕೆಯನ್ನು ಜಾಮೀನು ರಹಿತ ಅಪರಾಧದ ಶ್ರೇಣಿಯಲ್ಲಿ ಇರಿಸಲು ಹಾಗೂ ಇದರ ಅಡಿಯಲ್ಲಿ ಅಪರಾಧಿಗಳಿಗೆ ಮೂರು ವರ್ಷಗಳ ತನಕ ಜೈಲು ಶಿಕ್ಷೆಯನ್ನು ವಿಧಿಸಲು ಚಿಂತನೆ ನಡೆಸಿದೆ.
ಹಾಲು ಕಲಬೆರಕೆಯ ಶಿಕ್ಷೆಯನ್ನು ಮೂರು ವರ್ಷಕ್ಕೆ ಹೆಚ್ಚಿಸಿದಲ್ಲಿ, ಆರೋಪಿಗಳಿಗೆ ಜಾಮೀನು ಪಡೆಯಲು ಯಾವುದೇ ಅವಕಾಶ ಸಿಗುವುದಿಲ್ಲ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗಿರೀಶ್ ಬಾಪಟ್ ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಅವರು ಕೆಳಮನೆಯಲ್ಲಿ ಬಿಜೆಪಿ ಶಾಸಕ ಅಮೀತ್ ಸತಮ್ ಹಾಗೂ ಇತರರು ಗಮನ ಸೆಳೆವ ಸೂಚನೆಯ ಮೂಲಕ ಹಾಲು ಕಲಬೆರಕೆ ವಿಷಯದ ಬಗ್ಗೆ ಬೆಳೆಸಿದ ಚರ್ಚೆಗೆ ಪ್ರತಿಕ್ರಿಯಿಸುತ್ತಿದ್ದರು.
ಸದ್ಯಕ್ಕೆ ರಾಜ್ಯದಲ್ಲಿ ಹಾಲು ಕಲಬೆರಕೆಯು ಗರಿಷ್ಠ 6 ತಿಂಗಳ ಜೈಲು ಶಿಕ್ಷೆಯನ್ನು ಒಳಗೊಂಡಿರುವ ಒಂದು ಜಾಮೀನು ಸಹಿತ ಅಪರಾಧವಾಗಿದ್ದು, ಇದನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ರಾಜ್ಯ ಸರಕಾರವು ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾನೂನು ಮತ್ತು ನ್ಯಾಯಾಂಗ ಇಲಾಖೆಯೊಂದಿಗೆ ಚರ್ಚೆ ನಡೆಸಿದೆ ಎಂದು ಬಾಪಟ್ ತಿಳಿಸಿದರು.ಶಿಕ್ಷೆಯ ಅವಧಿಯು ಮೂರು ವರ್ಷಗಳ ವರೆಗೆ ವಿಸ್ತರಿಸಲ್ಪಟ್ಟರೆ, ಆರೋಪಿಗಳಿಗೆ ಜಾಮೀನು ಪಡೆಯಲು ಯಾವುದೇ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದ ಎಫ್ಡಿಎ ಸಚಿವ ಬಾಪಟ್ ಅವರು, ಇದಕ್ಕೆ ಸಂಬಂಧಪಟ್ಟ ಕಾನೂನುವೊಂದನ್ನು ಸರಕಾರವು ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದರು.
ಇಂತಹ ಅಪರಾಧಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಸದನದಲ್ಲಿ ಹಲವು ಮಂದಿ ಸದಸ್ಯರು ಒತ್ತಾಯಿಸಿದರು. ಆದರೆ, ಸಚಿವರು ಜೀವಾವಧಿ ಶಿಕ್ಷೆಯನ್ನು ಒಳಗೊಂಡ ಕಾನೂನನ್ನು ಜಾರಿಗೆ ತರುವಲ್ಲಿ ಹಲವು ತೊಡಕುಗಳನ್ನು ಉಲ್ಲೇಖೀಸಿದರು. ಪ್ರಸ್ತುತ ಹಾಲಿನ ಕಲಬೆರಕೆಯನ್ನು ಪರೀಕ್ಷಿಸಲು ರಾಜ್ಯದಲ್ಲಿ ಮೂರು ಮೊಬೈಲ್ ವ್ಯಾನ್ಗಳಿಗೆವೆ ಎಂದು ತಿಳಿಸಿದ ಬಾಪಟ್ ಅವರು, ಈ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಲಾಗುವುದಿಲ್ಲ ಎಂಬುದನ್ನು ಒಪ್ಪಿಕೊಂಡರು.ಆದಾಗ್ಯೂ, ನಿಯಮಿತ ಪರೀಕ್ಷೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗುವುದು ಎಂದವರು ಸದನಕ್ಕೆ ಭರವಸೆಯನ್ನು ನೀಡಿದರು.ಆರಂಭದಲ್ಲಿ ಬಿಜೆಪಿ ಶಾಸಕ ಸತಮ್ ಅವರು, ಮುಂಬಯಿಯಲ್ಲಿ ಸಿಗುವ ಶೇ. 30ಕ್ಕೂ ಅಧಿಕ ಹಾಲು ಕಲಬೆರಕೆಯಿಂದ ಕೂಡಿದ್ದಾಗಿದೆ ಎಂದು ಪ್ರತಿಪಾದಿಸಿದರು.ಮೊಬೈಲ್ ವ್ಯಾನ್ಗಳು ಹಾಗೂ ಸಿಬಂದಿಗಳ ಕೊರತೆಯಿಂದಾಗಿ ಮುಂಬಯಿಗೆ ತರಿಸಲಾಗುವ ಹಾಲುಗಳ ಅನಿರೀಕ್ಷಿತ ಪರೀಕ್ಷೆ ನಡೆಸಲಾಗುತ್ತಿಲ್ಲ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?