ತ್ರಿಪುರ: 3 ಸಚಿವರ ವಿರುದ್ಧ ಕ್ರಿಮಿನಲ್ ಕೇಸು, 6 ಕೋಟ್ಯಧೀಶರು
Team Udayavani, Mar 17, 2018, 11:07 AM IST
ಹೊಸದಿಲ್ಲಿ : ಮುಖ್ಯಮಂತ್ರಿ ಸಹಿತವಾಗಿ ನೂತನ ತ್ರಿಪುರ ಸರಕಾರದ ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರ ಪೈಕಿ ಮೂವರ ವಿರುದ್ಧ ಕ್ರಿಮಿನಲ್ ಕೇಸುಗಳಿವುದು ಅವರೇ ಸಲ್ಲಿಸಿರುವ ಅಫಿದಾವಿತ್ ಮೂಲಕ ಬಹಿರಂಗವಾಗಿದೆ.
ಅಸೋಸಿಯೇಶನ್ ಆಫ್ ಡೆಮೋಕ್ರಾಟಿಕ್ ರಿಫಾರ್ಮ್ (ಎಡಿಆರ್) ನಡೆಸಿರುವ ವಿಶ್ಲೇಷಣೆಯ ಪ್ರಕಾರ ಕ್ರಿಮಿನಲ್ ಕೇಸ್ ಹೊಂದಿರುವ ಮೂವರ ಪೈಕಿ ಇಬ್ಬರು ಸಚಿವರ ವಿರುದ್ಧ ಗಂಭೀರ ಅಪರಾಧಗಳ ಕೇಸುಗಳಿವೆ.
ಬಿಜೆಪಿಯ ರತನ್ ಲಾಲ್ ನಾಥ್ ವಿರುದ್ಧ ನಾಲ್ಕು ಗಂಭೀರ ಕ್ರಿಮಿನಲ್ ಕೇಸುಗಳಿವೆ. ಇವುಗಳಲ್ಲಿ ಕೊಲೆ ಯತ್ನ, ದೊಂಬಿ, ಮಾನನಷ್ಟ ದಾವೆಯೂ ಸೇರಿವೆ.
ಇನ್ನೋರ್ವ ಬಿಜೆಪಿ ಸಚಿವ ಸುದೀಪ್ ರಾಯ್ ಬರ್ಮನ್ ಅವರು ದೊಂಬಿ, ಹಲ್ಲೆ, ಮಾರಕಾಯುಧಗಳಿಂದ ಗಾಯ ಎಸಗಿರುವಂತಹ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.
ಮನೋಜ್ ಕಾಂತಿ ದೇಬ್ ಎಂಬ ಇನ್ನೋರ್ವ ಬಿಜೆಪಿ ಸಚಿವರು ಎರಡು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಮೂರೂ ಬಿಜೆಪಿ ಸಚಿವರು ಈ ತನಕ ಯಾವುದೇ ಕೇಸುಗಳಲ್ಲಿ ಅಪರಾಧಿಗಳೆಂದು ಪರಿಗಣಿತರಾಗಿಲ್ಲ.
ಇನ್ನೊಂದು ಮುಖ್ಯ ವಿಷಯವೆಂದರೆ 9 ಸಚಿವರ ಪೈಕಿ ಆರು ಮಂದಿ ಕರೋಡ್ಪತಿಗಳಾಗಿದ್ದಾರೆ. ಈ ಪೈಕಿ ವಿಷ್ಣು ದೇವ್ ವರ್ಮಾ, ಪ್ರಣಜಿತ್ ಸಿಂಗ್ ರಾಯ್ ಮತ್ತು ಸುದೀಪ್ ರಾಯ್ ಬರ್ಮನ್ ಅತ್ಯಂತ ಸಿರಿವಂತ ಸಚಿವರಾಗಿದ್ದಾರೆ.
ಸಚಿವ ಜಿಷ್ಣು ಅವರು 11 ಕೋಟಿ ಆಸ್ತಿಪಾಸ್ತಿಗಳ ಒಡೆಯರು; ಪ್ರಣಜಿತ್ 5 ಕೋಟಿ ಆಸ್ತಿ ಪಾಸ್ತಿ ಹೊಂದಿದ್ದಾರೆ. ಸುದೀಪ್ ಅವರ ಬಳಿ 3 ಕೋಟಿ ಆಸ್ತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ