ಎಂಎನ್ಎಸ್ ರಾಲಿಗೆ ಮುನ್ನ ಪವಾರ್ ಭೇಟಿಯಾದ ರಾಜ್ ಠಾಕರೆ
Team Udayavani, Mar 17, 2018, 4:18 PM IST
ಮುಂಬಯಿ : ನಾಳೆ ಭಾನುವಾರ ಎಂಎನ್ಎಸ್ ರಾಲಿ ನಡೆಯಲಿದ್ದು ಅದಕ್ಕೆ ಮುನ್ನ ಇಂದು ಶನಿವಾರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕರೆ ಅವರು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದರು.
ಪವಾರ್ ಅವರನ್ನು ದಕ್ಷಿಣ ಮುಂಬಯಿಯಲ್ಲಿನ ಅವರ ನಿವಾಸದಲ್ಲಿ ತಾನು ಭೇಟಿಯಾಗಿರುವುದು ಒಂದು ಸೌಹಾರ್ದದ ಭೇಟಿಯೇ ಹೊರತು ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ರಾಜ್ ಠಾಕರೆ ಸುದ್ದಿಗಾರರಿಗೆ ಹೇಳಿದರು.
ಕಳೆದ ತಿಂಗಳಲ್ಲಿ ನಡೆದಿದ್ದ ಸಾರ್ವಜನಿಕ ಸಂವಹನ ಕಾರ್ಯಕ್ರಮದಲ್ಲಿ ಪವಾರ್ ಅವರ ಸಂದರ್ಶನ ನಡೆಸಿದ್ದ ಎಂಎನ್ಎಸ್ ನಾಯಕ ಠಾಕರೆ ನಾಳೆಯ ತನ್ನ ಪಕ್ಷದ ರಾಲಿಯಲ್ಲಿ ಭಾಷಣ ಮಾಡಲಿದ್ದಾರೆ.