ಇದ್ದಿಲು ತಿಂದು ಹೊಗೆ ಬಿಡುವ ಆನೆ!
Team Udayavani, Mar 27, 2018, 6:00 AM IST
ನವದೆಹಲಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಧೂಮವನ್ನು ಹೊರಬಿಡುವ ವಿಡಿಯೋ ಭಾರಿ ಪ್ರಚಾರ ಪಡೆದಿದೆ. 2016ರಲ್ಲಿ ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿಯ ಭಾರತೀಯ ವಿಭಾಗದ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಸೆರೆ ಹಿಡಿದಿರುವ ವಿಡಿಯೋದಲ್ಲಿ ಆನೆಗಳ ಈ ವಿಚಿತ್ರ ಹವ್ಯಾಸ ಬಹಿರಂಗಗೊಂಡಿತ್ತು. ಮರ ಸುಟ್ಟ ಇದ್ದಿಲನ್ನು ತಿಂದುಕೊಂಡು ಆನೆಗಳು ಧೂಮವನ್ನು ಸೊಂಡಿಲಿನಿಂದ ಹೊರಹಾಕುತ್ತಿದೆ ಎಂದು ಹೇಳಲಾಗಿದ್ದು, ಇದಕ್ಕೆ ಹಲವು ರೀತಿಯ ಕಾರಣಗಳನ್ನೂ ನೀಡಲಾಗುತ್ತಿದೆ. ಇದ್ದಿಲು ವಿಷಾಂಶವನ್ನು ಹೀರಿಕೊಳ್ಳುವ ಶಕ್ತಿ ಹೊಂದಿದ್ದು, ಇದು ವನ್ಯಜೀವಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸು ವುದರಿಂದ, ಕಾಡ್ಗಿಚ್ಚು ಅಥವಾ ಮಿಂಚಿನ ಸಂದರ್ಭದಲ್ಲಿ ಉಂಟಾಗುವ ಇದ್ದಿಲನ್ನು ಇವು ಸೇವಿಸುತ್ತವೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.
ಇಂಗಾಲಯುಕ್ತ ಇದ್ದಿಲು ಜೀರ್ಣ ಪ್ರಕ್ರಿಯೆಯಲ್ಲಿ ಧೂಮ ಉಗುಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 2016ರಲ್ಲೇ ಇದನ್ನು ರೆಕಾರ್ಡ್ ಮಾಡಲಾಗಿತ್ತಾದರೂ, ವೀಡಿಯೋ ಬಿಡುಗಡೆ ಮಾಡಿರಲಿಲ್ಲ. ಇತ್ತೀಚೆಗೆ ಇದನ್ನು ಬಿಡುಗಡೆ ಮಾಡಿದ ನಂತರದಲ್ಲಿ ವನ್ಯಜೀವಿ ಪ್ರಿಯರಲ್ಲಿ ಅತ್ಯಂತ ಕುತೂಹಲ ಮೂಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ