ಪಾಕಿಗೆ ಹೋಗಿದ್ದ ವಿವಾಹಿತ ಸಿಕ್ಖ್ ಮಹಿಳೆ ಇಸ್ಲಾಂ ಗೆ ಮತಾಂತರ,ಮದುವೆ
Team Udayavani, Apr 20, 2018, 11:21 AM IST
ಹೋಶಿಯಾರ್ಪುರ, ಪಂಜಾಬ್ : ಪಾಕಿಸ್ಥಾನಕ್ಕೆ ಯಾತ್ರಿಕಳಾಗಿ ಹೋಗಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ 31 ವರ್ಷ ಪ್ರಾಯದ ಸಿಕ್ಖ್ ವಿವಾಹಿತ ಮಹಿಳೆ ಕಿರಣ್ ಬಾಲಾ, ಅಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ಲಾಹೋರ್ನ ವ್ಯಕ್ತಿಯೋರ್ವನನ್ನು ಮದುವೆಯಾಗಿರುವುದಾಗಿ ತಿಳಿದು ಬಂದಿದೆ.
ಸಿಕ್ಖ್ ಮಹಿಳೆ ಬಾಲಾ, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸಿಕ್ಖ್ ನಿಯೋಗದ ಭಾಗವಾಗಿ ಬೈಶಾಖೀ ಹಬ್ಬದಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನಕ್ಕೆ ತೆರಳಿದ್ದಳು.
ಕಿರಣ್ ಬಾಲಾ ಪಾಕ್ ಬೇಹು ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಕೈವಶವಾಗಿರುವ ಸಾಧ್ಯತೆ ಇದ್ದು ಕೇಂದ್ರ ಮತ್ತು ಪಂಜಾಬ್ ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶ ನಡೆಸಿ ನೆರವಾಗಬೇಕು ಎಂದು ಆಕೆಯ ಮಾವ ತಾರ್ಸೇಮ್ ಹೇಳಿದ್ದಾರೆ.
“ಕಿರಣ್ ಬಾಲಾ ಎ.16ರಂದು ನನ್ನನ್ನು ಸಂಪರ್ಕಿಸಿ ತಾನು ಲಾಹೋರ್ನ ವ್ಯಕ್ತಿ ಮೊಹಮ್ಮದ್ ಆಜಂ ಎಂಬಾತನನ್ನು ಮದುವೆಯಾಗಿರುವುದಾಗಿಯೂ ಮದುವೆಗೆ ಮುನ್ನ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿಯೂ, ಮದುವೆಯ ಪರಿಣಾಮವಾಗಿ ಆಮ್ನಾ ಬೀಬಿ ಎಂಬ ಹೊಸ ಹೆಸರನ್ನು ತನಗೆ ಇಡಲಾಗಿರುವುದಾಗಿಯೂ ಫೋನಿನಲ್ಲಿ ತನಗೆ ತಿಳಿಸಿದ್ದಳು’ ಎಂದು ತಾರ್ಸೇಮ್ ಹೇಳಿದ್ದಾರೆ.
“ನನ್ನ ಸೊಸೆಯನ್ನು ಈ ಸ್ಥಿತಿಯಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ (ನಿವೃತ್ತ) ಅಮರೀಂದರ್ ಸಿಂಗ್ ನೆರವಾಗಬೇಕ; ನನ್ನ ಸೊಸೆ ಪಾಕ್ ಬೇಹು ಸಂಸ್ಥೆ ಐಎಸ್ಐ ಕೈವಶವಾಗಿದ್ದಾಳೆ’ ಎಂದು ಗರ್ಶಂಕರ್ ಎಂಬ ಗ್ರಾಮದಲ್ಲಿ ಸಿಕ್ಖ್ ಧಾರ್ಮಿಕ ಬೋಧಕರಾಗಿರುವ ತಾರ್ಸೇಮ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ