ಮಥುರಾ : 22 ತಾಸಲ್ಲಿ ಅಪಹೃತ ಬಾಲಕನ ರಕ್ಷಣೆ; ಮೂವರ ಸೆರೆ
Team Udayavani, Apr 24, 2018, 4:30 PM IST
ಮಥುರಾ : ಇಪ್ಪತ್ತು ಲಕ್ಷ ರೂ. ಒತ್ತೆ ಹಣ ಪಡೆದು ಫ್ಯಾಕ್ಟರಿ ತೆರೆಯುವ ಯೋಜನೆಯಲ್ಲಿ ಎಂಟು ವರ್ಷ ಪ್ರಾಯದ ಬಾಲಕನನ್ನು ಅಪಹರಿಸಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು 22 ತಾಸುಗಳ ಒಳಗೆ ಬಾಲಕನನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಕೃಷ್ಣ ಕಾಂತ್, ಇಂದರ್ ಮತ್ತು ವಿನೀತ್ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಮೆಹರಾನಾ ಗ್ರಾಮದ ಹೊರವಲಯದಿಂದ ಲಕ್ಷ್ಮಣ್ ಎಂಬ 8 ವರ್ಷದ ಬಾಲಕನನ್ನು ಅಪಹರಿಸಿದ್ದರು. 20 ಲಕ್ಷ ರೂ. ಒತ್ತೆ ಹಣಕ್ಕಾಗಿ ಬಾಲಕನ ತಂದೆಗೆ ಇವರು ಕರೆ ಮಾಡಿದಾಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಇವರು ಒತ್ತೆ ಸೆರೆ ಪ್ರಕರಣ ಫಲಿಸದೇ ಹೋಯಿತು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಆದಿತ್ಯ ಶುಕ್ಲಾ ತಿಳಿಸಿದ್ದಾರೆ.
ಪೊಲೀಸರು ಮೂವರು ದುಷ್ಕರ್ಮಿಗಳ ವಿರುದ್ದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು