ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಟ್ರಕ್ ಹರಿದು ಇಬ್ಬರ ಸಾವು
Team Udayavani, May 9, 2018, 4:36 PM IST
ಕಥುವಾ/ಜಮ್ಮು : ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿನ ಜಮ್ಮು – ಪಠಾಣ್ಕೋಟ್ ಹೈವೇಯಲ್ಲಿ ಬಸ್ ಸ್ಟಾಪ್ ಒಂದರಲ್ಲಿ ಕುಳಿತಿದ್ದ ಜನರ ಮೇಲೆ ಟ್ರಕ್ ಒಂದು ನುಗ್ಗಿದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಇತರ ಐವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಜನರು ಹೈವೇಯಲ್ಲಿನ ಚಂದವಾನ್ ಮೋರ್ ಬಸ್ ಸ್ಟಾಪಲ್ಲಿ ಕುಳಿತು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವೇಗವಾಗಿ ಧಾವಿಸಿ ಬಂದು ನಿಯಂತ್ರಣ ಕಳೆದ ಕೊಂಡು ಟ್ರಕ್ ಜನರ ಮೇಲೆ ನುಗ್ಗಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಇಬ್ಬರನ್ನು ಕೂಲಿ ಕಾರ್ಮಿಕರಾದ ಮಹಾಬೀರ್ ಮತ್ತು ಮನೋಜ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಐವರನ್ನು ಸಮೀಪದ ಹೀರಾನಗರದಲ್ಲಿನ ಉಪ ವಿಭಾಗೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.