ಸೈನಿಕರು ನನ್ನನ್ನು ಕೊಲ್ಲದೆ ಜೀವದಾನ ನೀಡಿದರು;ಉಗ್ರನಿಗೆ ಪಾಪಪ್ರಜ್ಞೆ
Team Udayavani, May 10, 2018, 10:50 AM IST
ಶ್ರೀನಗರ : ಬಾರಾಮುಲ್ಲಾದಲ್ಲಿ ಸೇನಾಪಡೆಗಳಿಂದ ಬಂಧನಕ್ಕೊಳಗಾದ ಲಷ್ಕರ್ -ಇ-ತೊಯ್ಬಾ ಉಗ್ರ ಐಜಾಜ್ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಉಗ್ರವಾದಕ್ಕಿಳಿದಿರುವ ಇತರ ಯುವಕರು ಮನೆಗಳಿಗೆ ಮರಳಿ’ ಎಂದು ಮನವಿ ಮಾಡಿಕೊಂಡಿದ್ದಾನೆ.
ಸೈನಿಕರರ ಸಮಕ್ಷಮದಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋದಲ್ಲಿ ಉಗ್ರ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಸೈನಿಕರು ನನ್ನನ್ನು ಕೊಂದು ಬಿಡಬಹುದಿತ್ತು ,ಆದರೆ ಅವರು ಹಾಗೆ ಮಾಡದೆ, ನನಗೆ ಜೀವದಾನ ನೀಡಿದರು.ಯಾರೆಲ್ಲಾ ತಪ್ಪು ದಾರಿಯಲ್ಲಿದ್ದೀರಿ, ಅವರೆಲ್ಲಾ ಶಸ್ತ್ರಗಳನ್ನು ಬಿಟ್ಟು ಮನೆಗಳಿಗೆ ಮರಳಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಳ್ಳಿ’ ಎಂದು ಮನವಿ ಮಾಡಿದ್ದಾನೆ.
ಇನ್ನೋರ್ವ ಉಗ್ರ ನಾಸೀರ್ ಅಮಿನ್ ನನ್ನು ಉದ್ದೇಶಿಸಿ ಮಾತನಾಡಿದ ಗುಜ್ರಿ ‘ನಿನ್ನ ತಾಯಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು ಮನೆಗೆ ಮರಳಿ ಅವರ ಆರೈಕೆ ಮಾಡು’ ಎಂದು ಕೇಳಿಕೊಂಡಿದ್ದಾನೆ.
‘ನಾವು ಪೊದೆಗಳಲ್ಲಿ ಅಡಗಿ ಸೈನಿಕರತ್ತ ಗುಂಡು ಹಾರಿಸಿದೆವು. ಆದರೆ ಅವರು ಪ್ರತಿದಾಳಿ ಮಾಡದೆ ನನ್ನನ್ನು ಬಂಧಿಸಿ ಜೀವ ಉಳಿಸಿದರು’ ಎಂದಿದ್ದಾನೆ.
ಎಪ್ರಿಲ್ 30 ರಂದು ಗುಜ್ರಿಯನ್ನು ಸೇನಾಪಡೆಗಳು ವಶಕ್ಕೆ ಪಡೆದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ