ನೇಪಾಲದ ಸಹಾಯಕ್ಕೆ ಭಾರತ ಸದಾ ಸಿದ್ಧ


Team Udayavani, May 12, 2018, 8:41 AM IST

nerpal.jpg

ಜನಕಪುರಿ: ಭಾರತದ ಆದ್ಯತೆಯ ನೆರೆ ದೇಶಗಳ ಪಟ್ಟಿಯಲ್ಲಿ ನೇಪಾಲ ಅಗ್ರಸ್ಥಾನದಲ್ಲಿದ್ದು, ಆಪತ್ಕಾಲದಲ್ಲಿ ಭಾರತ ನೇಪಾಲದ ಸಹಾಯಕ್ಕೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದರು. ಇದೇ ವೇಳೆ, ಪುರಾಣ ಪ್ರಸಿದ್ಧ ಜನಕ ಪುರಿಯ ಅಭಿವೃದ್ಧಿಗಾಗಿ ಭಾರತದಿಂದ 100 ಕೋಟಿ ರೂ.ಗಳ ಅನುದಾನವನ್ನು ಮೋದಿ ಘೋಷಿಸಿದರು. 

ಎರಡು ದಿನಗಳ ಭೇಟಿಗಾಗಿ ಶುಕ್ರವಾರ ನೇಪಾಳಕ್ಕೆ ತೆರಳಿರುವ ಮೋದಿ, ತಮ್ಮ ಪ್ರವಾಸದ ಮೊದಲ ಭಾಗವಾಗಿ ಜನಕಪುರಕ್ಕೆ ತೆರಳಿದರು. ಅಲ್ಲಿನ ಪುರಸಭೆಯಿಂದ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಮತ್ತು ನೇಪಾಲ ರಾಷ್ಟ್ರಗಳು ಶತಮಾನಗಳಿಂದಲೂ ಉತ್ತಮ ಬಾಂಧವ್ಯ ಹೊಂದಿವೆ.

ಕಷ್ಟ-ಸುಖಗಳಲ್ಲಿ ಪರಸ್ಪರ ಭಾಗಿಯಾಗಿವೆ. ಈ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು” ಎಂದರು. ತಮ್ಮ ಈ ಮಾತುಗಳಿಗೆ ಪೂರಕವಾಗಿ, ರಾಮಚರಿತ ಮಾನಸ ಗ್ರಂಥದ ಸ್ನೇಹಿತನ ಕಷ್ಟಕಾಲದಲ್ಲಿ ಆತನ ನೆರವಿಗೆ ಧಾವಿಸುವವನೇ ನಿಜವಾದ ಸ್ನೇಹಿತ ಎಂಬ ವಾಕ್ಯವನ್ನು ಉಲ್ಲೇಖೀಸಿದರು. 

ಪ್ರಧಾನಿಯಲ್ಲ, ಪ್ರಮುಖ ಯಾತ್ರಾರ್ಥಿ: ಸಮಾರಂಭದಲ್ಲಿ, ಪ್ರಧಾನಿ ಮೋದಿ, ನೇಪಾಳಿ ಹಾಗೂ ಮೈಥಿಲಿ ಭಾಷೆಯಲ್ಲೇ ಭಾಷಣ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತಮ್ಮ ಮಾತನ್ನು ಆರಂಭಿಸುವ ಮುನ್ನ “ಜಯ್‌ ಸಿಯಾ ರಾಮ್‌’ (ಜೈ ಸೀತಾರಾಮ್‌) ಎಂದು ಮೂರು ಬಾರಿ ನುಡಿದು ನಂತರ ತಮ್ಮ ಮಾತುಗಳನ್ನು ಆರಂಭಿಸಿದರು. ಸೀತಾ ಮಾತೆಯ ಜನ್ಮ ಸ್ಥಳಕ್ಕೆ ತಾವು ಪ್ರಧಾನಿಯಾಗಿ ಬಂದಿಲ್ಲ. ಪ್ರಮುಖ ಯಾತ್ರಾರ್ಥಿಯಾಗಿ ಬಂದಿದ್ದೇನೆ ಎಂದರು. ಮೊದಲು ಅಲ್ಲಿನ ಐತಿಹಾಸಿಕ ಸೀತಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿಯಾದ ನಂತರ ಮೋದಿ, ನೇಪಾಲಕ್ಕೆ ಭೇಟಿ ನೀಡುತ್ತಿರುವುದು ಇದು 3ನೇ ಬಾರಿ. 

ವಿಶೇಷ ಪ್ರಾರ್ಥನೆ
ಜನಕಪುರಕ್ಕೆ ಕಾಲಿಟ್ಟ ನಂತರ, ಜಾನಕಿ ದೇಗುಲಕ್ಕೆ ತೆರಳಿದ ಪಿಎಂ ಮೋದಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ನಿಮಿತ್ತ ಷೋಡಶೋಪಚಾರ ಪೂಜೆ ಏರ್ಪಡಿಸಲಾಗಿತ್ತು. ನಂತರ, 10 ನಿಮಿಷಗಳ ಕಾಲ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಷೋಡಶೋಪಚಾರ ನಿಮಿತ್ತ ಜಾನಕಿ ಮಾತೆಯ ಮೂರ್ತಿಯನ್ನು ವಸ್ತ್ರಾಭರಣಗಳಿಂದ ಅಲಂಕರಿಸಲಾಗಿತ್ತು. ಈ ದೇಗುಲಕ್ಕೆ ರಾಷ್ಟ್ರಪತಿಗಳಾಗಿದ್ದ ನೀಲಂ ಸಂಜೀವ ರೆಡ್ಡಿ, ಗ್ಯಾನಿ ಜೈಲ್‌ಸಿಂಗ್‌, ಪ್ರಣವ್‌ ಮುಖರ್ಜಿ ಭೇಟಿ ನೀಡಿ , ಷೋಡಶೋಪಚಾರದಲ್ಲಿ ಪಾಲ್ಗೊಂಡಿದ್ದರು. ಸೀತೆ ನೆನಪಿಗಾಗಿ 1910ರಲ್ಲಿ ಈ ದೇಗುಲ ನಿರ್ಮಿಸಲಾಗಿದ್ದು, 164 ಅಡಿ ಎತ್ತರದಲ್ಲಿರುವ ಈ ದೇಗುಲ 4860 ಚದರ ಅಡಿ ವಿಸ್ತೀರ್ಣದಲ್ಲಿದೆ. 

ರಾಷ್ಟ್ರಪತಿ, ಉಪರಾಷ್ಟ್ರಪತಿ ಭೇಟಿ
ಮೋದಿಯವರಿಗೆ ನೇಪಾಲ ರಾಷ್ಟ್ರಪತಿ ಬಿಂದ್ಯಾ ದೇವಿ ಭಂಡಾರಿ ಅವರ ಅಧಿಕೃತ ನಿವಾಸವಾದ “ಸೀಟಲ್‌ ನಿವಾಸ್‌ ’ನಲ್ಲಿ ನೇಪಾಲ ಸೇನೆಯ ವತಿಯಿಂದ ಗೌರವ ವಂದನೆ ನೀಡಲಾಯಿತು. ನಂತರ, ಭಂಡಾರಿ ಜತೆ ಮೋದಿ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ, ನೇಪಾಲದ ಉಪ ರಾಷ್ಟ್ರಪತಿ ನಂದಾ ಬಹಾದ್ದೂರ್‌ ಪುನ್‌ ಅವರನ್ನೂ ಭೇಟಿ ಮಾಡಿದರು.

ಸೀತಾ,ರಾಮ ಜನ್ಮಸ್ಥಳ  ನಡುವೆ ನೇರ ಸಂಪರ್ಕ
ಸೀತಾಮಾತೆಯ ಜನ್ಮ ಸ್ಥಳವಾದ ನೇಪಾಲದ ಜನ ಕಪುರ ಮತ್ತು ಶ್ರೀರಾಮನ ಕೈಹಿಡಿದು ಸೊಸೆಯಾಗಿ ಬಂದ ಪಟ್ಟಣವಾದ ಉತ್ತರ ಪ್ರದೇಶದ ಅಯೋಧ್ಯೆಯ ನಡುವೆ ನೇರ ಬಸ್‌ ಸಂಚಾರ ಆರಂಭವಾಗಿದೆ. ನೇಪಾಲಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಶುಕ್ರ ವಾರ ಈ ಹೊಸ ಬಸ್‌ ಸಂಚಾರವನ್ನು ಜಂಟಿಯಾಗಿ ಉದ್ಘಾಟಿಸಿದರು. ಎರಡೂ ದೇಶಗಳು ಆರಂಭಿಸಿರುವ “ರಾಮಾಯಣ ಸಕೀìಟ್‌’ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದೆ. 

ಏನಿದು ರಾಮಾಯಣ ಸಕೀìಟ್‌?
ರಾಮಾಯಣಕ್ಕೆ ಸಂಬಂಧ ಪಟ್ಟ ಅನೇಕ ಐತಿಹಾಸಿಕ ಸ್ಥಳಗಳು ಭಾರತ, ನೇಪಾಳಗಳಲ್ಲಿವೆ. ಭಾರತದಲ್ಲಿ ಇಂಥ ಪ್ರಮುಖ ಸ್ಥಳಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ರಾಮಾಯಣ ಸಕೀìಟ್‌ ಎಂಬ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ , ಭಾರತದಲ್ಲಿ ಅಯೋಧ್ಯೆ, ನಂದಿ ಗ್ರಾಮ, ಶ್ರಿಂಗವೇರ್ಪುರ ಮತ್ತು ಚಿತ್ರಕೂಟ (ಉತ್ತರ ಪ್ರದೇಶ), ಸೀತಾಮಾಹಿì, ಬುಕ್ಸಾರ್‌ ಮತ್ತು ದರ್ಭಾಂಗ (ಬಿಹಾರ), ಚಿತ್ರಕೂಟ (ಮಧ್ಯ ಪ್ರದೇಶ), ಮಹೇಂದ್ರ ಗಿರಿ (ಒಡಿಶಾ), ಜಗದಾಲ್ಪುರ (ಛತ್ತೀಸ್‌ಗಢ), ನಾಸಿಕ್‌,ನಾಗುºರ (ಮಹಾರಾಷ್ಟ್ರ), ಭದ್ರಾ ಚಲಂ(ತೆಲಂಗಾಣ), ಹಂಪಿ (ಕರ್ನಾಟಕ), ರಾಮೇಶ್ವರಂ (ತಮಿಳುನಾಡು) ಪ್ರಾಂತ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

ಅಯೋಧ್ಯೆ ಮಹತ್ವ
ಮರ್ಯಾದಾ ಪುರುಷೋತ್ತಮನೆಂದೇ ಖ್ಯಾತಿ ಪಡೆದ ಶ್ರೀರಾಮ ಆಳಿದ ಕೋಸಲ ರಾಜ್ಯದ ರಾಜಧಾನಿಯೇ ಅಯೋಧ್ಯೆ. ಸೂರ್ಯ ವಂಶದ ದೊರೆಯಾದ ಈತನ ಆಳ್ವಿಕೆಯ ಕಾಲದಲ್ಲಿ ಕೋಸಲ ರಾಜ್ಯವು ಸುಭಿಕ್ಷವಾಗಿ, ಸಂಪದ್ಭರಿತವಾಗಿತ್ತೆಂದು ವರ್ಣಿಸಲಾಗಿದೆ.

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.