ನೇಪಾಲದ ಮುಕ್ತಿನಾಥ ದೇವಾಲಯಕ್ಕೆ ಮೋದಿ ಭೇಟಿ, ಪೂಜೆ ಸಲ್ಲಿಕೆ
Team Udayavani, May 12, 2018, 12:03 PM IST
ಕಾಠ್ಮಂಡು : ಕರ್ನಾಟಕ ವಿಧಾನಸಭಾ ಚುನಾವಣೆ ಭರಾಟೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೌದ್ಧರ ಸಾಂಪ್ರದಾಯಿಕ ಕೆಂಪುಡುಗೆ ತೊಟ್ಟು ಇಲ್ಲಿನ ಪ್ರಸಿದ್ಧ ಮುಕ್ತಿನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿನ ಸಾಂಪ್ರದಾಯಿಕ ನಗಾರಿ ಮತ್ತು ಘಂಟೆಯನ್ನು ಮೋದಿ ಅವರು ಅರ್ಚಕರೊಂದಿಗೆ ಸೇರಿ ಬಾರಿಸುವ ಮೂಲಕ ವಿಧ್ಯುಕ್ತ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡರು.
ದೇವಸ್ಥಾನದ ಕೆಲವು ಕಲಾವಿದರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಾಂಪ್ರದಾಯಿಕ, ಸಾಂಪ್ರದಾಯಿಕ ಸಂಗೀತವನ್ನು ನುಡಿಸಿದರು. ಮುಕ್ತಿನಾಥ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ ವಿಶ್ವದ ಮೊದಲ ನಾಯಕರೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. ..