ದಿಲ್ಲಿಯಲ್ಲಿ ಪೆಟ್ರೋಲ್ 76
Team Udayavani, May 21, 2018, 10:22 AM IST
ಹೊಸದಿಲ್ಲಿ: ಪ್ರತಿ ಲೀಟರ್ , ಡೀಸೆಲ್ಪೆಟ್ರೋಲ್ ದರ ಅತ್ಯಧಿಕ ಮಟ್ಟ ತಲುಪಿದೆ. ನವದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ಗೆ 76.24 ರೂ. ಡೀಸೆಲ್ 67.57 ರೂ. ಆಗಿದೆ. ನಾಲ್ಕು ವಾರಗಳಲ್ಲಿ ಏರಿಕೆ ಮಾಡದೆ, ಉಂಟಾದ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸಲು ತೈಲ ಕಂಪೆನಿಗಳು ಏರಿಕೆ ನಿರ್ಧಾರ ಕೈಗೊಂಡಿವೆ. ನವದಿಲ್ಲಿ ಯಲ್ಲಿ ಭಾನುವಾರ ಲೀಟರ್ ಪೆಟ್ರೋಲ್ ಬೆಲೆಯನ್ನು 33 ಪೈಸೆ, ಡೀಸೆಲ್ಗೆ 26 ಪೈಸೆ ಏರಿಕೆ ಮಾಡಲಾಗಿದೆ. 2017ರ ಜೂನ್ನಲ್ಲಿ ಜಾರಿಗೆ ಬಂದ ನಿತ್ಯದ ದರ ಪರಿಷ್ಕರಣೆಯ ನಂತರದ ಅತ್ಯಂತ ಹೆಚ್ಚಿನ ದರವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ಗೆ 77.81 ರೂ., ಡೀಸೆಲ್ಗೆ 68.98 ರೂ. ಆಗಿದೆ. ಪಣಜಿಯಲ್ಲಿ ಪೆಟ್ರೋಲ್ ಬೆಲೆ ಕಡಿಮೆ 70.26 ರೂ ಆಗಿತ್ತು. ಹೈದರಾಬಾದ್ನಲ್ಲಿ ಡೀಸೆಲ್ ದರ 73.45 ರೂ., ತಿರುವನಂತಪುರದಲ್ಲಿ 73.34 ರೂ. ಆಗಿತ್ತು. ಕೋಲ್ಕತಾದಲ್ಲಿ 78.91 ರೂ., ಚೆನ್ನೈನಲ್ಲಿ 79.13 ರೂ. ಆಗಿತ್ತು.
ಕರ್ನಾಟಕ ಚುನಾವಣೆಯ ಮತದಾನ ಮುಗಿದ ದಿನದಿಂದ ಬೆಲೆ ಪರಿಷ್ಕರಣೆಯನ್ನು ಪುನಃ ಆರಂಭಿಸಿದ್ದು, ಅಂದಿನಿಂದ ಪ್ರತಿ ದಿನವೂ ಏರಿಕೆ ಮಾಡಲಾಗುತ್ತಿದೆ. ಒಟ್ಟಾರೆ ಅಂದಿನಿಂದ ಲೀಟರ್ ಪೆಟ್ರೋಲ್ಗೆ 1.61 ರೂ. ಹಾಗೂ ಡೀಸೆಲ್ಗೆ 1.64 ರೂ. ಏರಿಕೆ ಮಾಡಲಾಗಿದೆ.
2014ರ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಪೆಟ್ರೋಲ್ ಬೆಲೆ ಬ್ಯಾರೆಲ್ಗೆ 80 ಡಾಲರ್ ಸಮೀಪಿಸಿದೆ. 2014 ನವೆಂಬರ್ನಿಂದ 2016 ಜನವರಿಯವರೆಗೆ ಒಂಬತ್ತು ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ದು, ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಹಾಗೂ ಡೀಸೆಲ್ ಮೇಲೆ 13.47 ರೂ. ವಿಧಿಸಿದೆ. ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಬೆಲೆ ಏರಿಕೆಯಾಗುತ್ತಿರುವಾಗ ಕಳೆದ ಅಕ್ಟೋಬರ್ನಲ್ಲಿ ಮಾತ್ರ 2 ರೂ. ಇಳಿಕೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil