ಮಧ್ಯಪ್ರದೇಶ: ಟ್ರಕ್ಕಿಗೆ ಬಸ್ಸು ಢಿಕ್ಕಿ; 10 ಸಾವು; 47 ಮಂದಿಗೆ ಗಾಯ
Team Udayavani, May 21, 2018, 12:24 PM IST
ಗುಣ, ಮಧ್ಯಪ್ರದೇಶ : ಇಂದು ನಸುಕಿನ ವೇಳೆ ಜಿಲ್ಲೆಯ ರುಥಿಯಾಯಿ ಪಟ್ಟಣಕ್ಕೆ ಸಮೀಪ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್ಕಿಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅವಘಡದಲ್ಲಿ ಒಂದು ಮಗು ಸಹಿತ ಒಟ್ಟು 10 ಮಂದಿ ದಾರುಣವಾಗಿ ಮೃತಪಟ್ಟು ಇತರ 47 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ನತದೃಷ್ಟ ಖಾಸಗಿ ಬಸ್ಸು ಗುಜರಾತ್ನ ಅಹ್ಮದಾಬಾದ್ನಿಂದ ಉತ್ತರ ಪ್ರದೇಶದ ಬಂಡಾ ಎಂಬಲ್ಲಿಗೆ ಸಾಗುತ್ತಿತ್ತು. ರುಥಿಯಾಯಿ ಪಟ್ಟಣಕ್ಕೆ ಸಮೀಪ ಹೆದ್ದಾರಿ ಪಕ್ಕದಲ್ಲಿ ತಾಂತ್ರಿಕ ತೊಂದರಗಳಿಂದಾಗಿ ನಿಂತಿದ್ದ ಟ್ರಕ್ಕಿಗೆ ಅದು ಢಿಕ್ಕಿ ಹೊಡೆಯಿತು ಎಂದು ಗುಣ ಪೊಲೀಸ್ ಠಾಣೆ ಪ್ರಭಾರಾಧಿಕಾರಿ ವಿವೇಕ್ ಅಸ್ಥಾನಾ ತಿಳಿಸಿದ್ದಾರೆ.
ಮೃತರಲ್ಲಿ ಬಸ್ಸಿನ ಚಾಲಕ ಸಹಿತ ಏಳು ಮಂದಿ ಸ್ಥಳದಲ್ಲೇ ಸಾವಪ್ಪಿದ್ದಾರೆ. ಇತರ ಮೂವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆ. 10 ಮಂದಿ ಮೃತದಲ್ಲಿ 9 ಮಂದಿ ಪುರುಷರು ಮತ್ತು ಒಂದೂವರೆ ವರ್ಷ ಪ್ರಾಯದ ಹೆಣ್ಣು ಮಗು ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್