ನಾಳೆಯಿಂದ ಕೇರಳದಲ್ಲಿ ತೈಲೋತ್ಪನ್ನ ರೂ1 ಇಳಿಕೆ
Team Udayavani, May 31, 2018, 6:00 AM IST
ನವದೆಹಲಿ/ತಿರುವನಂತಪುರ: ತೈಲೋ ತ್ಪನ್ನಗಳ ದರ ಏರಿಕೆಯಲ್ಲಿರುವಾಗಲೇ ಕೇರಳ ಸರ್ಕಾರ ಶುಕ್ರವಾರದಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ಗೆ 1 ರೂ.ಕಡಿತ ಮಾಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಈ ಘೋಷಣೆ ಮಾಡಿದ್ದಾರೆ.
ಇದರಿಂದಾಗಿ ಕೇರಳ ಸರ್ಕಾರದ ಬೊಕ್ಕಸಕ್ಕೆ 509 ಕೋಟಿ ರೂ. ತೆರಿಗೆ ಆದಾಯ ನಷ್ಟವಾಗಲಿದೆ ಎಂದಿದ್ದಾರೆ. ನಮ್ಮ ಸರ್ಕಾ ರದ ಕ್ರಮ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ. ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ನಮ್ಮ ಸಂದೇಶ ಇದು ಎಂದು ಹೇಳಿಕೊಂಡಿದ್ದಾರೆ.
ಐಓಸಿ ಎಡವಟ್ಟು: ಇದೇ ವೇಳೆ, ಸತತ 16 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಬುಧವಾರ 60 ಪೈಸೆಯಷ್ಟು ಬೆಲೆ ತಗ್ಗಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಓಸಿ) ಪ್ರಕಟಣೆ ಹೊರಡಿಸಿತ್ತು. ಕ್ಷಣ ಮಾತ್ರದಲ್ಲಿ ಈ ಮಾಹಿತಿ ಎಲ್ಲಾ ಕಡೆ ಹಬ್ಬಿತು. ಆದರೆ ಕೆಲವೇ ನಿಮಿಷಗಳಲ್ಲಿ ದರ ಇಳಿಕೆ ಪ್ರಮಾಣ 60 ಪೈಸೆ ಅಲ್ಲ. ಬದಲಾಗಿ 1 ಪೈಸೆಯಷ್ಟು ಮಾತ್ರ ಇಳಿಕೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿತು. 1 ಪೈಸೆ ದರ ಇಳಿಕೆಯಾದ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 78.42, 56 ಪೈಸೆ ಪ್ರತಿ ಲೀಟರ್ ಡೀಸೆಲ್ಗೆ ಇಳಿಕೆಯಾದ ಬಳಿಕ 68.75 ರೂ. ಇದೆ.
ಕೇವಲ 1 ಪೈಸೆ?: ರಾಹುಲ್ ಟೀಕೆ: 1 ಪೈಸೆ ದರ ಇಳಿಕೆ ಮಾಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಕೇವಲ 1 ಪೈಸೆ ದರ ಇಳಿಕೆ? ಪ್ರಧಾನಿಯವರೇ ಇದು ಕೂಡ ಮತ್ತೂಂದು ಸುಳ್ಳೇ? ಇದು ಬಾಲಿಶತನದ್ದು. ಒಂದು ಪೈಸೆ ಕಡಿತ ಮಾಡಿರುವುದು ನಾನು ನಿಮಗೆ ನೀಡಿದ ದರ ಕಡಿತ ಮಾಡಿ ಚಾಲೆಂಜ್ಗೆ ಸೂಕ್ತ ಉತ್ತರ ಅಲ್ಲ’ ಎಂದು ಬರೆದುಕೊಂಡಿದ್ದಾರೆ.
ಫ್ರಿಡ್ಜ್, ವಾಷಿಂಗ್ ಮಷೀನ್ ದುಬಾರಿ?
ಫ್ರಿಡ್ಜ್, ವಾಷಿಂಗ್ ಮಷೀನ್ ಖರೀದಿ ಮಾಡಿಲ್ಲವೇ? ಹಾಗಿದ್ದರೆ ಮೇ 31 (ಗುರುವಾರ)ರ ಒಳಗಾಗಿ ಖರೀದಿ ಮಾಡಿ. ಏಕೆಂದರೆ ಫ್ರಿಡ್ಜ್, ವಾಷಿಂಗ್ ಮಷೀನ್, ಮೈಕ್ರೋವೇವ್ ಒವೆನ್ ಮೇಲಿನ ದರಗಳಲ್ಲಿ 400 ರೂ.ಗಳಿಂದ 1,500 ರೂ.ಗಳ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಹೆಚ್ಚಾಗಿರುವುದರಿಂದ ರುಪಾಯಿ ಮೌಲ್ಯ ಕುಸಿದಿರುವುದು, ಸ್ಟೀಲ್ ಮತ್ತು ತಾಮ್ರ ಸೇರಿದಂತೆ ಹಲವು ಲೋಹಗಳ ಮೇಲಿನ ದರಗಳಲ್ಲಿಯೂ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮಾದರಿಗಳ ಮೇಲೆ ದರ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?