ಸೌದಿ ಈಗ ಭಾರೀ ದುಬಾರಿ
Team Udayavani, Jun 8, 2018, 9:50 AM IST
ಹೈದರಾಬಾದ್: ಸೌದಿ ಅರೇಬಿಯಾದಲ್ಲಿ ಈಗ ಅನಿವಾಸಿ ಭಾರತೀಯರಿಗೆ ಬದುಕು ವುದೇ ಕಷ್ಟವಾಗುತ್ತಿದೆಯಾ?
ಹೌದು, ಎನ್ನುತ್ತಿದೆ ಈ ವರದಿ. ಜೀವನ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದ್ದು, ಭವಿಷ್ಯದಲ್ಲಿ ಆತಂಕ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದೇ ಕಾರಣಕ್ಕಾಗಿ ಆತಂಕಕ್ಕೆ ಒಳಗಾಗಿರುವ ಅನಿವಾಸಿ ಭಾರತೀಯ ಕುಟುಂಬಗಳು ತವರಿಗೆ ಮರಳುತ್ತಿವೆ. ಆದರೆ ಈಗಾಗಲೇ ಅದೆಷ್ಟು ಕುಟುಂಬಗಳು ಮರಳಿವೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಅಷ್ಟಕ್ಕೂ ಈ ಅಂಶ ಬೆಳಕಿಗೆ ಬಂದದ್ದು ಹೈದರಾಬಾದ್ ನ ಶಾಲೆಗಳಿಂದ. ಕಳೆದ ಕೆಲ ವಾರಗಳಲ್ಲಿ ಈ ಶಾಲೆಗಳಲ್ಲಿ ಎನ್.ಆರ್.ಐ.ಗಳ ಮಕ್ಕಳ ಅಡ್ಮಿಷನ್ ಗಳು ಹಠಾತ್ತಾಗಿ ಹೆಚ್ಚಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಎಸ್. ಗ್ರೂಪ್ ಶಾಲೆಗಳ ಅಧ್ಯಕ್ಷ ಎಂ.ಎ. ಲತೀಫ್, “ನಮ್ಮ ಗ್ರೂಪ್ ಗೆ ಸೇರಿದ ಶಾಲೆಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೌದಿಯಿಂದ ಮರಳಿದ ಪೋಷಕರ ಮಕ್ಕಳಾಗಿದ್ದಾರೆ. ಅವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ. ಪೋಷಕರಲ್ಲಿ ದೇಶಕ್ಕೆ ಮರಳಿದ ಕಾರಣ ಕೇಳಿದಾಗ, ಸೌದಿ ಅರೇಬಿಯಾದಲ್ಲಿ ದೈನಂದಿನ ವೆಚ್ಚ ದುಬಾರಿಯಾಗಿದೆೆ. ಅನಿವಾಸಿ ಭಾರತೀ ಯರು ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಹೀಗಾಗಿ ಬಹಳ ಮಂದಿ ಕುಟುಂಬ ಸದಸ್ಯರನ್ನೆಲ್ಲ ತವರಿಗೆ ಕಳುಹಿಸುತ್ತಿದ್ದಾರೆ ಎನ್ನುವ ಅಂಶ ಗೊತ್ತಾಯಿತು” ಎಂದಿದ್ದಾರೆ. ಇದರಂತೆ ಹೈದರಾಬಾದ್ ಇನ್ನೂ ಕೆಲವು ಶಾಲೆಗಳಿಗೆ ಅನಿವಾಸಿ ಭಾರತೀಯರು ತಮ್ಮ ಮಕ್ಕಳನ್ನು ಸೇರಿಸಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil