ಸೌದಿ ಈಗ ಭಾರೀ ದುಬಾರಿ
Team Udayavani, Jun 8, 2018, 9:50 AM IST
ಹೈದರಾಬಾದ್: ಸೌದಿ ಅರೇಬಿಯಾದಲ್ಲಿ ಈಗ ಅನಿವಾಸಿ ಭಾರತೀಯರಿಗೆ ಬದುಕು ವುದೇ ಕಷ್ಟವಾಗುತ್ತಿದೆಯಾ?
ಹೌದು, ಎನ್ನುತ್ತಿದೆ ಈ ವರದಿ. ಜೀವನ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದ್ದು, ಭವಿಷ್ಯದಲ್ಲಿ ಆತಂಕ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದೇ ಕಾರಣಕ್ಕಾಗಿ ಆತಂಕಕ್ಕೆ ಒಳಗಾಗಿರುವ ಅನಿವಾಸಿ ಭಾರತೀಯ ಕುಟುಂಬಗಳು ತವರಿಗೆ ಮರಳುತ್ತಿವೆ. ಆದರೆ ಈಗಾಗಲೇ ಅದೆಷ್ಟು ಕುಟುಂಬಗಳು ಮರಳಿವೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಅಷ್ಟಕ್ಕೂ ಈ ಅಂಶ ಬೆಳಕಿಗೆ ಬಂದದ್ದು ಹೈದರಾಬಾದ್ ನ ಶಾಲೆಗಳಿಂದ. ಕಳೆದ ಕೆಲ ವಾರಗಳಲ್ಲಿ ಈ ಶಾಲೆಗಳಲ್ಲಿ ಎನ್.ಆರ್.ಐ.ಗಳ ಮಕ್ಕಳ ಅಡ್ಮಿಷನ್ ಗಳು ಹಠಾತ್ತಾಗಿ ಹೆಚ್ಚಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಎಸ್. ಗ್ರೂಪ್ ಶಾಲೆಗಳ ಅಧ್ಯಕ್ಷ ಎಂ.ಎ. ಲತೀಫ್, “ನಮ್ಮ ಗ್ರೂಪ್ ಗೆ ಸೇರಿದ ಶಾಲೆಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೌದಿಯಿಂದ ಮರಳಿದ ಪೋಷಕರ ಮಕ್ಕಳಾಗಿದ್ದಾರೆ. ಅವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ. ಪೋಷಕರಲ್ಲಿ ದೇಶಕ್ಕೆ ಮರಳಿದ ಕಾರಣ ಕೇಳಿದಾಗ, ಸೌದಿ ಅರೇಬಿಯಾದಲ್ಲಿ ದೈನಂದಿನ ವೆಚ್ಚ ದುಬಾರಿಯಾಗಿದೆೆ. ಅನಿವಾಸಿ ಭಾರತೀ ಯರು ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಹೀಗಾಗಿ ಬಹಳ ಮಂದಿ ಕುಟುಂಬ ಸದಸ್ಯರನ್ನೆಲ್ಲ ತವರಿಗೆ ಕಳುಹಿಸುತ್ತಿದ್ದಾರೆ ಎನ್ನುವ ಅಂಶ ಗೊತ್ತಾಯಿತು” ಎಂದಿದ್ದಾರೆ. ಇದರಂತೆ ಹೈದರಾಬಾದ್ ಇನ್ನೂ ಕೆಲವು ಶಾಲೆಗಳಿಗೆ ಅನಿವಾಸಿ ಭಾರತೀಯರು ತಮ್ಮ ಮಕ್ಕಳನ್ನು ಸೇರಿಸಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು