ರೈಲು ಫುಟ್ಬೋರ್ಡ್ನಲ್ಲಿ ಸೆಲ್ಫಿ: 2 ಸಾವಿರ ರೂ. ದಂಡ
Team Udayavani, Jun 24, 2018, 6:00 AM IST
ಕೊಯಮತ್ತೂರು: ರೈಲು ಹತ್ತಿರ ಬರುತ್ತಿದ್ದಂತೆ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸ್ಟೇಟಸ್ ಹಾಕಿಕೊಳ್ಳುವ ಯೋಚನೆ ಮಾಡುವವರೇ ಜೋಕೆ! ಇನ್ನು ಮುಂದೆ ಅಂಥ “ಸಾಹಸ’ಕ್ಕೇನಾದರೂ ಮುಂದಾದರೆ ದಂಡ ಅಥವಾ ಜೈಲುವಾಸ ಖಚಿತ.
ಚಲಿಸುತ್ತಿರುವ ರೈಲಿನ ಫುಟ್ಬೋರ್ಡ್ ಮೇಲೆ ನಿಂತು ಮತ್ತು ರೈಲು ಸಮೀಪಿಸುವಾಗ ಹಳಿಯ ಬಳಿ ನಿಂತು ಸೆಲ್ಫಿà ಕ್ಲಿಕ್ಕಿಸಿಕೊಳ್ಳುವ ಪ್ರಯಾಣಿಕರಿಗೆ ತಲಾ 2,000 ರೂ. ದಂಡ ವಿಧಿಸಲು ದಕ್ಷಿಣ ವಿಭಾಗೀಯ ರೈಲ್ವೇ ನಿರ್ಧರಿಸಿದೆ. ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚು ತ್ತಿರುವ ಹಿನ್ನೆಲೆ ಯಲ್ಲಿ ಯುವ ಪ್ರಯಾಣಿಕರಿಗೆ ಕಠಿನ ಎಚ್ಚರಿಕೆ ನೀಡುವ ಸಲುವಾಗಿ ಇಂಥ ನಿರ್ಧಾರ ತೆಗೆದು ಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೊಯ ಮತ್ತೂರು ರೈಲ್ವೇ ಜಂಕ್ಷನ್ ಮ್ಯಾನೇಜರ್ ಸೆಂಥಿಲ್ ವೇಲ್, ಸೇಲಂ ವಿಭಾಗದಲ್ಲಿ ಬರುವ ಎಲ್ಲ ಸ್ಟೇಷನ್ ಮಾಸ್ಟರ್ಗಳು ಮತ್ತು ಮ್ಯಾನೇಜರ್ಗಳಿಗೆ ಈಗಾಗಲೇ ಈ ಕುರಿತು ಸುತ್ತೋಲೆ ರವಾನಿಸಲಾಗಿದೆ. ರೈಲು, ರೈಲ್ವೇ ನಿಲ್ದಾಣ, ರೈಲ್ವೇ ಹಳಿಗಳ ಬಳಿ ಸೆಲ್ಫಿ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ದುರಂತಗಳಿಗೆ ಕಡಿವಾಣ ಹಾಕುವ ಸಲುವಾಗಿಯೇ ಈ ಕ್ರಮ ಕೈಗೊಂಡಿದ್ದೇವೆ. ಸೆಲ್ಫಿ ತೆಗೆದದ್ದು ಕಂಡುಬಂದಲ್ಲಿ 2,000 ರೂ. ದಂಡ ವಿಧಿಸಲಾಗುವುದು. ಅದೇ ವ್ಯಕ್ತಿ ಮತ್ತೆ ಅದೇ ತಪ್ಪು ಮಾಡಿದರೆ ಆತನಿಗೆ 6 ತಿಂಗಳ ಸಜೆ ವಿಧಿಸಲಾಗುವುದು ಎಂದಿದ್ದಾರೆ.
ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಶುಕ್ರವಾರದಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮೊದಲ ದಿನವಾದ ಕಾರಣ ಪ್ರಯಾ ಣಿಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ. ಇನ್ನು ಮುಂದೆ ನಿಯಮ ಪ್ರಕಾರ ದಂಡ ವಿಧಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ರೈಲ್ವೇಯ ಈ ನಿರ್ಧಾರವನ್ನು ಪ್ರಯಾಣಿಕರೂ ಸ್ವಾಗತಿಸಿದ್ದು, ನಮ್ಮ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದಿದ್ದಾರೆ.
ಗೋವಾದಲ್ಲಿ 24 “ನೋ ಸೆಲ್ಫಿ ಝೋನ್’
ಗೋವಾದ ಬೀಚ್ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೀರುಪಾಲಾಗುವಂಥ ಘಟನೆಗಳು ಹೆಚ್ಚುತ್ತಿರುವ ಕಾರಣ ಇಲ್ಲಿ 24 “ನೋ ಸೆಲ್ಫಿ ವಲಯ’ಗಳನ್ನು ಗುರುತಿಸಲಾಗಿದೆ. ಸರಕಾರ ನೇಮಿಸಿರುವ ಜೀವರಕ್ಷಕ ಸಂಸ್ಥೆಯು ಈ ವಲಯಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಸೆಲ್ಫಿಗೆ ನಿಷೇಧ ಹೇರಲಾಗುತ್ತದೆ ಎಂದು ದೃಷ್ಟಿ ಮೆರೈನ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿಶಂಕರ್ ತಿಳಿಸಿದ್ದಾರೆ. ಬಾಗಾ, ಡೋನಾ ಪೌಲಾ ಜೆಟ್ಟಿ, ಸಿಂಕ್ವೆರಿಮ್ ಫೋರ್ಟ್, ಅಂಜುನಾ, ವಗಾತರ್, ಮೋರ್ಜಿಮ್, ಅಶ್ವೆಮ್, ಅರಂಬೋಳ್, ಕೆರಿಮ್ ಸಹಿತ 24 ಪ್ರದೇಶಗಳನ್ನು ಸೆಲ್ಫಿ ನಿಷೇಧ ವಲಯ ಎಂದು ಗುರುತಿಸಿದ್ದೇವೆ ಎಂದೂ ಹೇಳಿದ್ದಾರೆ. ಜತೆಗೆ ಈಗಾಗಲೇ ಎಲ್ಲ ಬೀಚ್ಗಳಲ್ಲಿ “ನೋ-ಸ್ವಿಮ್ ವಲಯ’ (ಈಜು ನಿಷೇಧಿತ ಪ್ರದೇಶ)ಗಳೆಂದು ಗುರುತಿಸಿ, ಅಲ್ಲಿ ಈಜಾಡದಂತೆ ಎಚ್ಚರಿಕೆ ನೀಡಲು ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ
Ban: ಎಕ್ಸ್ ಮೇಲೆ ನಿರ್ಬಂಧ ಹೇರಿದ ಪಾಕಿಸ್ಥಾನ
Kochi; ವಿದೇಶಿ ಮಹಿಳಾ ಪ್ರವಾಸಿಗರಿಂದ ಪ್ಯಾಲೆಸ್ತೀನ್ ಪರ ಬೋರ್ಡ್ಗಳು ಧ್ವಂಸ!!
Kerala: ಸಿಪಿಐ(ಎಂ) ಪ್ರಣಾಳಿಕೆಯಲ್ಲಿನ ಭರವಸೆಗೆ ರಾಜನಾಥ್ ಸಿಂಗ್ ಆಕ್ರೋಶ.. ಏನದು ಭರವಸೆ?
Gujarat: ಹಿಂಬದಿಯಿಂದ ಟ್ರಕ್ಗೆ ಕಾರು ಢಿಕ್ಕಿ; ಭೀಕರ ಅಪಘಾತದಲ್ಲಿ 10 ಮಂದಿ ದುರ್ಮರಣ