ಕಾಂಗ್ರೆಸ್ ನಾಯಕರ ಭೇಟಿಗಾಗಿ ನಾನು ಬಂದಿಲ್ಲ:ದೆಹಲಿಯಲ್ಲಿ ಎಚ್ಡಿಡಿ
Team Udayavani, Jun 27, 2018, 2:23 PM IST
ಹೊಸದಿಲ್ಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ 5 ರಂದು ಬಜೆಟ್ ಮಂಡಿಸುತ್ತಾರೆ, ಈ ಬಗ್ಗೆ ಆತಂಕ ಬೇಡ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ದೆಹಲಿಗೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ, ತೃತೀಯ ರಂಗದ ನಾಯಕರನ್ನೂ ಭೇಟಿಯಾಗಲು ಬಂದಿಲ್ಲ. ರಕ್ಷಣಾ ಇಲಾಖೆಯ ಸಭೆಯಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು.
ನಾನು ಯಾರ ಹೆಸರು ಹಿಡಿದು ಮಾತನಾಡುವ ಅಗತ್ಯವಿಲ್ಲ ಎಂದ ಅವರು ಜುಲೈ 5 ರಂದು ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಖಚಿತ.ಬಜೆಟ್ 12 ರ ಒಳಗೆ ಪಾಸ್ ಆಗಲಿದೆ ಎಂದರು.