ಏಡಿಗಳ ಹನ್ನೊಂದು ಪ್ರಭೇದ;ಒಂದು  ಕುಲ ಪತ್ತೆಹಚ್ಚಿದ ತೇಜಸ್‌ ಠಾಕ್ರೆ


Team Udayavani, Jun 28, 2018, 11:18 AM IST

5.jpg

ಮುಂಬಯಿ: ಠಾಕ್ರೆ ಕುಟುಂಬದ ಮೂರನೇ ತಲೆಮಾರು ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಹಿರಿಯ ಮಗ ಆದಿತ್ಯ ಠಾಕ್ರೆ ಅವರು ರಾಜಕೀಯ ರಂಗದಲ್ಲಿ  ತಮ್ಮ ಛಾಪನ್ನು  ಪ್ರದರ್ಶಿಸುತ್ತಿದ್ದರೆ,ಆದಿತ್ಯ ಅವರ  ಸಹೋದರ ತೇಜಸ್‌ ಠಾಕ್ರೆ ಅವರು ವನ್ಯಜೀವಿ ಸಂಶೋಧನೆಯಲ್ಲಿ  ಹೊಸ ಸಾಧನೆಯನ್ನು ಮಾಡುತ್ತ,  ಸಂಶೋಧನಾ ಕ್ಷೇತ್ರದಲ್ಲಿ  ಠಾಕ್ರೆ ಕುಟುಂಬದ ಹೆಸರನ್ನು ರಾರಾಜಿಸುವಂತೆ ಮಾಡುತ್ತಿದ್ದಾರೆ.

ಉದ್ಧವ್‌  ಠಾಕ್ರೆ ಅವರ ಕಿರಿಯ ಮಗ ತೇಜಸ್‌ ಠಾಕ್ರೆ ಅವರು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ  ಏಡಿಗಳ 11 ಅಪರೂಪದ ಪ್ರಭೇದಗಳನ್ನು ಮತ್ತು ತಾಜಾ ನೀರಿನ ಏಡಿಗಳ ಹೊಸ ಕುಲವನ್ನು ಕಂಡುಹಿಡಿದಿದ್ದಾರೆ.

20ರ ಹರೆಯದ ವಿದ್ಯಾರ್ಥಿ  ತೇಜಸ್‌ ಠಾಕ್ರೆ ಅವರ ಈ ವೈಜ್ಞಾನಿಕಾ ಸಂಶೋಧನೆಯು ನ್ಯೂಜಿಲ್ಯಾಂಡ್‌ ಮೂಲದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜುಟಾಕ್ಸಾದಲ್ಲಿ  ಪ್ರಕಟವಾಗಿದೆ ಎಂದು ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಹರ್ಷಲ್‌ ಪ್ರಧಾನ್‌ ತಿಳಿಸಿದ್ದಾರೆ.

ಈ ಸಂಶೋಧನೆಗಳಲ್ಲಿ ಭಾಗವಹಿಸಿರುವ ತಂಡವು ತಾವು ಕಂಡು ಹಿಡಿದ ಏಡಿಗಳ ಹೊಸ ಕುಲಕ್ಕೆ “ಸಹ್ಯಾದ್ರಿಯಾನಾ’ (ಪಶ್ಚಿಮ ಘಟ್ಟಗಳಿಗೆ ಮರಾಠಿ ಹೆಸರು ಸಹ್ಯಾದ್ರಿ) ಎಂಬ ಹೆಸರನ್ನಿಟ್ಟಿದೆ ಎಂದವರು ಹೇಳಿದ್ದಾರೆ.

ತೇಜಸ್‌ ಅವರು  ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಸಮೂಹದಲ್ಲಿ ನೆಲೆಸಿರುವ ಕೊಂಕಣ, ಸತಾರ, ಕೊಲ್ಲಾಪುರ ಮತ್ತು ಅಹ್ಮದ್‌ನಗರ ಪ್ರದೇಶಗಳಲ್ಲಿ ಏಡಿಗಳ ಹೊಸ ಪ್ರಭೇದಗಳನ್ನು ಪತ್ತೆಮಾಡಿದ್ದಾರೆ. ತೇಜಸ್‌ ಅವರಿಗೆ ಈ ಕೆಲಸದಲ್ಲಿ  ಅವರ ಇಬ್ಬರು ಸಂಗಡಿಗರುಗಳಾದ ಡಾ| ಸಮೀರ್‌ ಕುಮಾರ್‌ ಪಾಟೀಲ್‌ ಮತ್ತು ಅನೀಲ್‌ ಖರೆ ಅವರು ಜೊತೆ ನೀಡಿದ್ದರು.

ಡಾ| ಎಸ್‌. ಕೆ. ಪಾಟೀಲ್‌ ಅವರು ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣಾ ಇಲಾಖೆಗೆ ಸಂಬಂಧಪಟ್ಟವರಾಗಿದ್ದಾರೆ. ಇವರು ತೇಜಸ್‌ಗೆ ಸಂಶೋಧನಾ ದಾಖಲೆಗಳನ್ನು  ಬರೆಯಲು ಸಹಾಯ ಮಾಡಿದ್ದರು. 2015 ಮತ್ತು 2017ರ ಅವಧಿಯಲ್ಲಿ ಈ ಸಂಶೋಧನೆ ನಡೆದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಜೀವವೈವಧ್ಯತೆಯಿಂದ ಕೂಡಿದ್ದು, ಸಸ್ಯ ಮತ್ತು ಪ್ರಾಣಿಗಳ ಸಾವಿರಾರು ಪ್ರಭೇದಗಳು ಅಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರು ವನ್ಯಜೀವಿಗಳು ಹಲವು ಬಗೆಯ ಪ್ರಭೇದಗಳನ್ನು ಇಲ್ಲಿ ಪತ್ತೆಮಾಡಿದ್ದಾರೆ.

2015ರ ಜುಲೈನಿಂದ ತೇಜಸ್‌ ಅವರು  ಏಡಿಯ ಹೊಸ ಪ್ರಭೇದವನ್ನು ಹುಡುಕುವ ಕೆಲಸವನ್ನು ಆರಂಭಿಸಿದ್ದರು. ಇದಕ್ಕಾಗಿ ಅವರಿಗೆ  ಹಲವು ತಿಂಗಳು ಕೊಂಕಣದಲ್ಲಿ  ನೆಲೆಸಿದ್ದರು. ಇಷ್ಟೇ ಅಲ್ಲದೆ, ಅವರು ತಮ್ಮ ಸಂಶೋಧನೆ ಕೆಲಸಕ್ಕಾಗಿ  ಹೆಚ್ಚಿನ ದಿನಗಳವರೆಗೆ ದಟ್ಟ ಕಾಡುಗಳಲ್ಲಿ  ಜಿಗಣೆ ಮತ್ತು ವಿಷಪೂರಿತ ಹಾವುಗಳ ನಡುವೆ  ಉಳಿದ್ದಿದ್ದರು. ಮಳೆಗಾಲದ ಸಮಯದಲ್ಲಿ ಕ್ಯಾಮೆರಾ ಮತ್ತು ಇತರ ಉಪಕರಣಗಳನ್ನು ಮಳೆನೀರಿನಿಂದ ರಕ್ಷಿಸುವುದು ತೇಜಸ್‌ ಅವರ ಮುಂದೆ ಸವಾಲಾಗಿತ್ತು.  ಎಲ್ಲಕ್ಕೂ ಮೊದಲಾಗಿ ಅವರು ಸರೀಸೃಪಗಳು ಮತ್ತು ಉಭಯಚರಗಳ ಮೇಲೆ ಸಂಶೋಧನೆಯನ್ನು ಪ್ರಾರಂಭಿಸಿದ್ದರು. ಏಡಿಗಳನ್ನು ಪತ್ತೆಹಚ್ಚುವ, ಅವುಗಳ ಫೋಟೋ ತೆಗೆಯುವ ಹಾಗೂ ಅವುಗಳ ಮಾದರಿಗಳನ್ನು  ಸಂಗ್ರಹಿಸುವ ಕೆಲಸವನ್ನು  ಕೇವಲ  ತೇಜಸ್‌ ಅವರೇ ಮಾಡಿದ್ದರು.  ತಂಡದ ಇತರ ಸದಸ್ಯರು ಶೋಧಿಸಲ್ಪಟ್ಟ  ಪ್ರಭೇದಗಳಿಗೆ  ಹೆಸರು ಸೂಚಿಸುವುದರಿಂದ ಹಿಡಿದು  ಅವುಗಳ ಬಗ್ಗೆ  ಬರೆಯುವ ಕೆಲಸ ಮಾಡಿದ್ದರು.

ಈ ಸಂಪೂರ್ಣ ಯೋಜನೆ ನನ್ನ ಫೀಲ್ಡ್‌ ಟೀಮ್‌ನ ಕಠಿನ ಪರಿಶ್ರಮದ ಫಲಿತಾಂಶವಾಗಿದೆ. ಈ ಸಂಶೋಧನೆಗಾಗಿ ನಮಗೆ ಪರವಾನಿಗೆಯನ್ನು ನೀಡಿದ್ದಕ್ಕಾಗಿ ನಾಮ ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ತೇಜಸ್‌ ನುಡಿದಿದ್ದಾರೆ. ತೇಜಸ್‌ ಅವರಿಗೆ ರಾಜಕೀಯದಲ್ಲಿ ಸೇರುವ ಯಾವುದೇ ಯೋಜನೆಗಳು ಇಲ್ಲವಂತೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.