ಪ್ರಣಬ್ ಬಳಿಕ ಈಗ ರತನ್ ಟಾಟಾ: ಭಾಗವತ್ ಜತೆ ಒಂದೇ ವೇದಿಕೆಯಲ್ಲಿ
Team Udayavani, Jul 10, 2018, 5:12 PM IST
ಹೊಸದಿಲ್ಲಿ : ವ್ಯಾಪಕ ಪ್ರತಿಭಟನೆ ಮತ್ತು ಟೀಕೆಗಳ ಹೊರತಾಗಿಯೂ ನಾಗ್ಪುರದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನಗಳ ಬಳಿಕ ಇದೀಗ ದೇಶದ ಪ್ರಖ್ಯಾತ ಉದ್ಯಮಿ ರತನ್ ಟಾಟಾ ಅವರು ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಆಗಸ್ಟ್ 24ರಂದು ಮುಂಬಯಿಯಲ್ಲಿ, ಆರ್ಎಸ್ಎಸ್ಗೆ ಸಂಯೋಜಿತವಾಗಿರುವ ನಾನಾ ಪಾಲ್ಕರ್ ಸ್ಮ್ರತಿ ಸಮಿತಿಯು ಏರ್ಪಡಿಸಲಿರುವ ಕಾರ್ಯಕ್ರಮದಲ್ಲಿ ಟಾಟಾ ಮತ್ತು ಭಾಗವತ್ ಅವರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
ಆರ್ಎಸ್ಎಸ್ ಸಂಯೋಜಿತ ಎನ್ಜಿಓ ಮಾಡಿರುವ ಸಮಾಜ ಕಲ್ಯಾಣ ಸೇವೆಗಳ ಬಗ್ಗೆ ರತನ್ ಟಾಟಾ ಅವರಿಗೆ ತಿಳಿವಳಿಕೆ ಇರುವುದರಿಂದಲೇ ಅವರು ಭಾಗವತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ಸಂಘ ಕಾರ್ಯಕರ್ತರನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ