ಮುಂಬಯಿ ರಸ್ತೆ ಹೊಂಡ ಲೆಕ್ಕ ಹಾಕಲು ಕಾಂಗ್ರೆಸ್ ಅಭಿಯಾನ
Team Udayavani, Jul 12, 2018, 7:23 PM IST
ಮುಂಬಯಿ : ಮಹಾ ಮಳೆ ಮತ್ತು ನೆರೆಗೆ ನಲುಗಿರುವ ಮುಂಬಯಿಯಲ್ಲಿನ ರಸ್ತೆ ಹೊಂಡಗಳನ್ನು ಲೆಕ್ಕ ಹಾಕುವ ಪ್ರತಿಭಟನಾ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ಆರಂಭಿಸಿದೆ.
ಮುಂಬಯಿ ಮಹಾ ಮಳೆಗೆ ಮಹಾ ನಗರಿಯ ರಸ್ತೆಗಳು ಸಂಪೂರ್ಣವಾಗಿ ಜರ್ಜರಿತವಾಗಿದ್ದು ಇದಕ್ಕಾಗಿ ಆಳುವ ಬಿಜೆಪಿ ಮತ್ತು ಶಿವಸೇನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಅವರು “ಬಿಜೆಪಿ ಮತ್ತು ಶಿವಸೇನೆಯವರು ಈಗ ಎಲ್ಲಿಯೂ ಕಾಣುತ್ತಿಲ್ಲ; ಆದರೂ ನಾವು ಮುಂಬಯಿ ಮಹಾನಗರಿಯ ರಸ್ತೆ ಹೊಂಡಗಳನ್ನು ಲೆಕ್ಕ ಹಾಕಿ ಅವುಗಳ ಫೋಟೋವನ್ನು ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ಗೆ ಕಳುಹಿಸುವ ಅಭಿಯಾನವನ್ನು ಆರಂಭಿಸಿದ್ದೇವೆ’ ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು “ಮುಂಬಯಿ ಮಹಾ ನಗರದ ರಸ್ತೆ ಹೊಂಡಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹವಾಗಿ ಇಳಿದಿದೆ. ರಸ್ತೆ ಹೊಂಡಗಳನ್ನು ಇನ್ನಷ್ಟು ಗಮನಾರ್ಹವಾಗಿ ಕಡಿಮೆ ಮಾಡುವ ದಿಶೆಯಲ್ಲಿ ನಾವು ಮುಂಬಯಿ ಪೌರಾಡಳಿತೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಬಾಂಬೆ (ಐಐಟಿ-ಬಿ) ಜತೆಗೂಡಿ ಕೆಲಸ ಮಾಡುವೆವು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ