ಸ್ಮಾರ್ಟ್ ಫೋನ್ ಕೊಡದ ಗೆಳೆಯನನ್ನು ಕೊಂದು ಸುಟ್ಟ ತರುಣ
Team Udayavani, Jul 17, 2018, 4:31 PM IST
ಹೈದರಾಬಾದ್ : ಹದಿನೇಳು ವರ್ಷ ಪ್ರಾಯದ ತನ್ನ ನೆರೆಮನೆಯ ಸ್ನೇಹಿತನನ್ನು ಆತ ಕೊಡಲು ನಿರಾಕರಿಸಿದ ಸ್ಮಾರ್ಟ್ ಫೋನಿಗಾಗಿ, 19 ವರ್ಷದ ತರುಣನೋರ್ವ ಆತನನ್ನು ಕೊಂದು ಬಳಿಕ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಹೈದರಾಬಾದ್ ಪೊಲೀಸರು ಆರೋಪಿ ತರುಣನನ್ನು ಸೆರೆ ಹಿಡಿದಿದ್ದಾರೆ.
ಬಂಧಿತ ಕೊಲೆಗಾರ ತರುಣನನ್ನು ಜಿ ಪ್ರೇಮ್ ಸಾಗರ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನಾಗಿರುವ ನೆರೆಮನೆಯ ಡಿ ಪ್ರೇಮ್ ಎಂಬಾತನನ್ನು ಅದಿಬಾತ್ಲಾ ದ ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಆತನನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಂದು ಪೆಟ್ರೋಲ್ ಸುರಿದು ಸುಟ್ಟಿದ್ದಾನೆ ಎಂದು ಎಸಿಪಿ ಮಲ್ಕಾಗಿರಿ ತಿಳಿಸಿದ್ದಾರೆ.
ಪ್ರೇಮ್ ನ ಮನೆಯವರು ಕಳೆದ ಜುಲೈ 14ರಂದು ಆತ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶಂಕಿತ ಸಾಗರ್ನನ್ನು ಹಿಡಿದು ಪ್ರಶ್ನಿಸಿದಾಗ ಆತ ತಾನು ಪ್ರೇಮ್ ನನ್ನು ಆತ ತನಗೆ ಕೊಡಲು ನಿರಕಾರಿಸಿದ್ದ ಆತನ ಸ್ಮಾರ್ಟ್ ಫೋನಿಗಾಗಿ ಕೊಂದು ಸುಟ್ಟಿದ್ದು ಹೌದೆಂದು ಒಪ್ಪಿಕೊಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ