ಷರೀಫ್ ಗೆ ಜೈಲಿನಲ್ಲಿ ಜೀವಕ್ಕೆ ಅಪಾಯ ? ಸಹಕೈದಿಗಳಿಂದ ಕಿರುಕುಳ


Team Udayavani, Jul 21, 2018, 11:41 AM IST

nawaz-sharif-700.jpg

ಇಸ್ಲಾಮಾಬಾದ್‌ : ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿರುವ ಪದಚ್ಯುತ, ಮೂರು ಬಾರಿಯ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ಈಗ ಹಿಂದಿನಂತೆ ಪಾರ್ಕ್‌ ನಲ್ಲಿ  ನಡೆದಾಡುವುದು ಕನಸಿನ ಮಾತಾಗಿದೆ; ತಮ್ಮ ಜೈಲು ಕೋಣೆಯಿಂದ ಹೊರ ಬಂದು ಹಜಾರದೆಡೆಗೆ ಹೋಗುವುದು ಕೂಡ ಷರೀಫ್ ಗೆ ಅಪಾಯಕಾರಿಯಾಗಿದೆ. 

ಷರೀಫ್ ಅವರು ಹೀಗೆ ತಮ್ಮ ಜೈಲು ಕೋಣೆಯಿಂದ ಹೊರ ಬಂದಾಗಲೆಲ್ಲ ಈ ಜೈಲಿನ ಇತರ ಕೋಣೆಗಳಲ್ಲಿರುವ ಕೈದಿಗಳು ಷರಿಫ್ ಮತ್ತು ಅವರ ಪಿಎಂಎಲ್‌ಎನ್‌ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾರೆ. ಇದರಿಂದ ಷರೀಫ್ ಗೆ ತೀರ ಕಿರಿಕಿರಿ ಆಗುತ್ತಿದೆ.

ಇದಕ್ಕಿಂತಲೂ ಮಿಗಿಲಾಗಿ ಈಗ ಷರೀಫ್ಗೆ ಜೈಲಿನಲ್ಲಿ ಪ್ರಾಣ ಭಯ ಎದುರಾಗಿದೆ. ಸಹ ಕೈದಿಗಳಲ್ಲಿರಬಹುದಾದ ರಾಜಕೀಯ ವಿರೋಧಿ ಕೈದಿಗಳು ನವಾಜ್‌ ಷರೀಫ್ ಮೇಲೆ ಮಾರಣಾಂತಿಕ ದಾಳಿ ನಡೆಸಬಹುದಾದ ಸಾಧ್ಯತೆಗಳಿವೆ ಎಂದು ಅವರ ವಕೀಲರೇ ಕೋರ್ಟಿನಲ್ಲಿ ಭೀತಿ ವ್ಯಕ್ತಪಡಿಸಿದ್ದಾರೆ. ಅಂತಹ ಸನ್ನಿವೇಶ ಈಗ ಬಹುತೇಕ ವಾಸ್ತವವೇ ಆಗಿದೆ ಎನ್ನಲಾಗಿದೆ.

ನವಾಜ್‌ ಷರೀಫ್ ಅವರಿಗೆ ಜೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ಢಾಳಾಗಿ ಕಾಣಿಸುತ್ತಿದೆ. ತಮ್ಮ ಜೈಲು ಕೋಣೆಯಲ್ಲಿನ ಟಾಯ್ಲೆಟ್‌ ತುಂಬಾ ಶಿಥಿಲವಾಗಿರುವುದು ಷರೀಫ್ ಗೆ ಜುಗುಪ್ಸೆ ಉಂಟುಮಾಡಿದೆ. 

ಸಾಮಾನ್ಯವಾಗಿ ರಾಜಕೀಯ ಪ್ರತಿಷ್ಠಿತರನ್ನು ಜೈಲಿಗೆ ಹಾಕುವ ಪ್ರಸಂಗಗಳಲ್ಲಿ ಇಸ್ಲಾಮಾಬಾದ್‌ ಜೈಲನ್ನೇ ಸರಕಾರ ಆಯ್ಕೆ ಮಾಡುತ್ತದೆ; ಆದರೆ ಷರೀಫ್ ಸಂದರ್ಭದಲ್ಲಿ ಅವರನ್ನು ಸರ್ವ ಬಗೆಯ ಕೈದಿಗಳನ್ನು ಕೂಡಿ ಹಾಕುವ ರಾವಲ್ಪಿಂಡಿಯ ಕುಖ್ಯಾತ ಅದಿಯಾಲಾ ಜೈಲಿನಲ್ಲಿ ಇರಿಸಲಾಗಿದೆ. 

ನಿಜಕ್ಕಾದರೆ ಅದಿಯಾಲಾ ಜೈಲು ಅಧಿಕಾರಿಗಳಿಗೆ ಷರೀಫ್ ಅವರನ್ನು ಇಲ್ಲಿ ಇರಿಸಿಕೊಳ್ಳಲು ಮನಸ್ಸಿಲ್ಲ; ಈ ಜೈಲಿನಲ್ಲಿ ಕಟ್ಟರ್‌ ಉಗ್ರರನ್ನು ಇಡಲಾಗಿದೆ. ಷರೀಫ್ ಅವರನ್ನು ಇಲ್ಲಿನ ಜೈಲಿನಲ್ಲಿ ಇರಿಸಲಾದ ಬಳಿಕ ಜೈಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಷರೀಫ್ ಅವರನ್ನು ಇಸ್ಲಾಮಾಬಾದಿನ ಸಿಹಾಲಾ ರೆಸ್ಟ್‌ ಹೌಸ್‌ ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಈ ರೆಸ್ಟ್‌ ಹೌಸ್‌ ಒಂದು ಉಪ ಜೈಲಾಗಿದೆ ಮತ್ತು ಈಗ ಇದನ್ನು ಷರೀಫ್ ಮತ್ತು ಅವರ ಪುತ್ರಿ ಮರ್ಯಾಮ್‌ ಅವರಿಗಾಗಿ ಸಿದ್ಧಪಡಿಸಿಡಲಾಗಿದೆ. 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.