ನಾಶಿಕ್ : ಬಾಲಕ ಚಿರತೆಗೆ ಆಹಾರವಾಗುವುದನ್ನು ತಪ್ಪಿಸಿದ ತಾಯಿ, ಅಜ್ಜಿ
Team Udayavani, Aug 3, 2018, 4:48 PM IST
ನಾಶಿಕ್ : ಹೊಲದಲ್ಲಿ ಆಟವಾಡಿಕೊಂಡಿದ್ದ ಮೂರು ವರ್ಷ ಪ್ರಾಯದ ಬಾಲಕನು ಚಿರತೆಗೆ ಆಹಾರವಾಗುವುದನ್ನು ಆತನ ತಾಯಿ ಮತ್ತು ಅಜ್ಜಿ ಎಂಟೆದೆಯಿಂದ ಹೋರಾಡಿ ಪಾರುಗೊಳಿಸಿದ ಘಟನೆ ನಾಶಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ಕೇತಕಿ ಗ್ರಾಮದಲ್ಲಿ ನಡೆದಿದೆ.
ಬಾಲಕನು ಹೊಲದಲ್ಲಿ ಆಟವಾಡಿಕೊಂಡಿದ್ದಾಗ ಅದೆಲ್ಲಿಂದಲೋ ಛಂಗನೆ ಹಾರಿ ಬಂದ ಹೆಣ್ಣು ಚಿರತೆಯೊಂದು ಬಾಲಕನನ್ನು ಕಚ್ಚಿ ತನ್ನ ಬಾಯಲ್ಲಿ ಹಿಡಿದುಕೊಂಡಿತು. ಆಗ ಆತನ ಆಕ್ರಂದನ ಕೇಳಿಸಿಕೊಂಡ ಆತನ ತಾಯಿ ಮತ್ತು ಅಜ್ಜಿ ಧಾವಿಸಿ ಬಂದು ಚಿರತೆ ವಿರುದ್ಧ ಹೋರಾಡಿ ಬಾಲಕನನ್ನು ರಕ್ಷಿಸಿದರು. ಇವರ ಬೊಬ್ಬೆ ಕೇಳಿ ಆಸುಪಾಸಿನ ಜನರೂ ಧಾವಿಸಿ ಬಂದು ನೆರವಾದರು.
ಚಿರತೆ ಬಾಲಕನನ್ನು ಬಿಟ್ಟು ಅರಣ್ಯದೊಳಗೆ ಓಡಿ ಹೋಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು