ಕೋಲ್ಕತ ಎಟಿಎಂ ಲೂಟಿ: 3 ನಿರುದ್ಯೋಗಿ ಇಂಜಿನಿಯರ್ಗಳು ಅರೆಸ್ಟ್
Team Udayavani, Aug 9, 2018, 4:06 PM IST
ಕೋಲ್ಕತ : ಲಕ್ಷಾಂತರ ರೂಪಾಯಿ ಎಟಿಎಂ ವಂಚನೆ ಹಗರಣದಲ್ಲಿ ಕಳೆದ ಆಗಸ್ಟ್ 3ರಂದು ದಿಲ್ಲಿಯಲ್ಲಿ ಮೂವರು ರೋಮನ್ನರು ಬಂಧಿಸಲಾದುದನ್ನು ಅನುಸರಿಸಿ ಇಂದು ಗುರುವಾರ ಈ ಜಾಲಕ್ಕಾಗಿ ಕೋಲ್ಕತದಲ್ಲಿನ ಎಟಿಎಂ ಮಶೀನ್ಗಳ ಸ್ಕಿಮ್ಮಿಂಗ್ ನಡೆಸುತ್ತಿದ್ದ ಮೂವರು ನಿರುದ್ಯೋಗಿ ಇಂಜಿನಿಯರ್ಗಳನ್ನು ಬಂಧಿಸಿದರು.
ಈ ಜಾಲದಲ್ಲಿ ಹಲವಾರು ನಿರುದ್ಯೋಗಿ ಇಂಜಿನಿಯರ್ಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಇಂದು ಬಂಧಿಸಲ್ಪಟ್ಟ ಮೂವರು ಇಂಜಿನಿಯರ್ ಗಳಿಂದ ಪೊಲೀಸರು ಸ್ಕಿಮ್ಮರ್ ಮಶೀನ್ ಗಳು, ಸೂð ಡೈವರ್ಗಳು, ಕ್ಲೋನ್ ಮಾಡಲ್ಪಟ್ಟ ಕಾರ್ಡುಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡರು.
ದಿಲ್ಲಿಯಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ರೋಮನ್ನರನ್ನು ಇಂದು ಗುರುವಾರ ಕೋಲ್ಕತ ಸೆಶನ್ಸ್ ಕೋರ್ಟಿನಲ್ಲಿ ಹಾಜರುಪಡಿಸಲಾಗಿ ಅವರನ್ನು ಆಗಸ್ಟ್ 21ರ ವರಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
“ನಾವೀಗ ಪತ್ತೆ ಹಚ್ಚಿರುವುದು ಭಾರೀ ದೊಡ್ಡ ಎಟಿಎಂ ಹಗರಣದ ಒಂದು ಸಣ್ಣ ಭಾಗ ಮಾತ್ರ. ಇನ್ನೆರಡು ದಿನಗಳಲ್ಲಿ ನಾವು ನಾವು ಇಡಿಯ ಪ್ರಕರಣವನ್ನು ಆಮೂಲಾಗ್ರವಾಗಿ ಭೇದಿಸಲಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಟಿಎಂ ಸ್ಕಿಮ್ಮಿಂಗ್ ನಡೆಸಿರುವ ಖದೀಮರು ಮೊದಲಾಗಿ ಸೆಕ್ಯುರಿಟಿ ಗಾರ್ಡ್ ಗಳು ಇಲ್ಲದ ಎಟಿಎಂ ಗಳನ್ನೇ ಆಯ್ದುಕೊಂಡು ಬ್ಯಾಂಕಿಂಗ್ ಅವಧಿಗೆ ಮುನ್ನ ಅಲ್ಲಿನ ಎಟಿಎಂ ಮಶೀನ್ನಲ್ಲಿ ಸ್ಕಿಮ್ಮಿಂಗ್ ಉಪಕರಣ ಇತ್ಯಾದಿಗಳನ್ನು ಸೆಟ್ ಮಾಡುತ್ತಿದ್ದರು. ರಾತ್ರಿಯ ಬಳಿಕ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಅವಧಿಯಲ್ಲಿ ಯಾರೆಲ್ಲ ಎಟಿಎಂ ಗೆ ಬಂದು ಹಣ ಡ್ರಾ ಮಾಡಿರುವರೋ ಅವರ ಕಾರ್ಡ್ ಮಾಹಿತಿ, ಪಾಸ್ ವಾರ್ಡ್ ಎಲ್ಲವನ್ನೂ ಸ್ಕಿಮ್ಮಿಂಗ್ ಮೂಲಕ ಕದಿಯಲಾಗುತ್ತಿತ್ತು.
ಬಂಧಿತ ಮೂವರು ರೋಮನ್ನರು ಕೋಲ್ಕತದ ನಿರುದ್ಯೋಗಿ ಇಂಜಿನಿಯರ್ಗಳಿಗೆ ಭಾರೀ ಹಣದಾಸೆ ತೋರಿಸಿ ಸ್ಕಿಮ್ಮಿಂಗ್, ಕ್ಲೋನಿಂಗ್ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಈ ಕೆಲಸಗಳು ಈ ವರ್ಷ ಎಪ್ರಿಲ್ನಲ್ಲಿ ನಡೆದಿದ್ದವು. ಜುಲೈಯಲ್ಲಿ ರೋಮನ್ ಖದೀಮರು ದಿಲ್ಲಿಯ ಎಟಿಎಂ ಗಳಲ್ಲಿ ಕ್ಲೋನ್ ಮಾಡಲ್ಪಟ್ಟ ಎಟಿಎಂ ಕಾರ್ಡುಗಳನ್ನು ಬಳಸಿಕೊಂಡು 20 ಲಕ್ಷ ರೂ.ಗಳನ್ನು ಲೂಟಿ ಮಾಡಿದ್ದರು.
ಕೋಲ್ಕತದ ವಿವಿಧ ಬ್ಯಾಂಕುಗಳ ಸುಮಾರು 72 ಗ್ರಾಹಕರು ಒಂದೇ ದಿನ ತಮ್ಮ ಖಾತೆಯಿಂದ ಹಣ ಲಪಟಾವಣೆಗೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಮೊದಲಾಗಿ ದಿಲ್ಲಿಯಲ್ಲಿ ಮೂವರು ರೋಮನ್ನರು ಬಂಧಿಸಿದರು. ಅನಂತರ ಅವರಿಂದ ಈ ಜಾಲದ ಮಾಹಿತಿಗಳನ್ನು ಕಕ್ಕಿಸಿದ ಬಳಿಕ ಇಂದು ಮೂವರು ಇಂಜಿನಿಯರ್ಗಳನ್ನು ಪೊಲೀಸರು ಸೆರೆಹಿಡಿಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು