ಮೂವರನ್ನು ಸುಟ್ಟು ಕೊಂದ ಖತರ್ನಾಕ್ ಆರೋಪಿ ರೈಲಿನಿಂದ ಎಸ್ಕೇಪ್
Team Udayavani, Aug 10, 2018, 6:07 PM IST
ನಾಶಿಕ್ : ಮಹಾರಾಷ್ಟ್ರದ ನಾಶಿಕ್ನಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಶಿಶುವನ್ನು ಬೆಂಕಿ ಹಚ್ಚಿ ಸುಟ್ಟು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಉತ್ತರ ಪ್ರದೇಶದಿಂದ ಮರಳಿ ತರುವಾಗ ಆತ ರೈಲಿನಲ್ಲಿ ಎಸ್ಕೇಪ್ ಆದನೆಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕೊಲೆ ಆರೋಪಿ ಜಲಾಲುದ್ದೀನ್ ಖಾನ್ ಎಂಬಾತನು ಕಳೆದ ಬುಧವಾರ ರಾತ್ರಿ ಮಧ್ಯ ಪ್ರದೇಶದಲ್ಲಿ ಗಂಜ್ ಬಸೋಡಾ ಮತ್ತು ವಿದಿಷಾ ರೈಲು ನಿಲ್ದಾಣಗಳ ನಡುವೆ ಝೀಲಂ ಎಕ್ಸ್ಪ್ರೆಸ್ ರೈಲಿನಿಂದ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಖಾನ್ ನನ್ನು ನಾಶಿಕ್ ಪೊಲೀಸರು ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯ ಕನೋಥಿಯಾ ಎಂಬ ಆತನ ಗ್ರಾಮದಿಂದ ಬಂಧಿಸಿ ರೈಲಿನಲ್ಲಿ ಕರೆತರುತ್ತಿದ್ದಾಗ ಆತ ಎಸ್ಕೇಪ್ ಆದ.
ಆರೋಪಿ ಖಾನ್ ರೈಲಿನಲ್ಲಿ ತನಗೆ ಶೌಚಾಲಯಕ್ಕೆ ಹೋಗುವುದಿದೆ ಎಂದು ಕಾವಲು ಪೊಲೀಸರಲ್ಲಿ ಹೇಳಿ ಹೋದಾಗ ರೈಲು ನಿಧಾನವಾಗುತ್ತಿರುವುದನ್ನು ಗಮನಿಸಿ ಕತ್ತಲೆಯ ಲಾಭ ಪಡೆದು ರೈಲಿನಿಂದ ಹೊರ ಜಿಗಿದು ಪರಾರಿಯಾದ.
ಖಾನ್ ರೈಲಿನಿಂದ ಜಿಗಿದೊಡನೆಯೇ ಇಬ್ಬರು ಕಾವಲು ಪೊಲೀಸರು ಕೂಡ ರೈಲಿನಿಂದ ಹೊರ ಜಿಗಿದರೂ ಅವರಿಗೆ ಖಾನ್ ನನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಂಚವಟಿ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಮಧುಕರ… ಕಾಡ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ