ಮಾಜಿ ಪ್ರಧಾನಿ ಅಟಲ್ ಚಿತಾಭಸ್ಮ ಇಂದು ಹರಿದ್ವಾರದಲ್ಲಿ ಲೀನ
Team Udayavani, Aug 19, 2018, 6:00 AM IST
ಹೊಸದಿಲ್ಲಿ / ಔರಂಗಾಬಾದ್: ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಭಾನುವಾರ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ವಿಸರ್ಜಿಸಲಾಗುತ್ತದೆ. ಅಷ್ಟೇ ಅಲ್ಲ, ದೇಶದ ವಿವಿಧ ಪುಣ್ಯಸ್ಥಳಗಳಲ್ಲೂ ವಿಸರ್ಜಿಸಲಾಗುತ್ತದೆ. ಭಾನುವಾರ ಹರಿದ್ವಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಉ.ಪ್ರ ಸಿಎಂ ಯೋಗಿ ಆದಿತ್ಯನಾಥ ಹಾಗೂ ಇತರ ಗಣ್ಯರು ಹಾಜರಾಗಲಿದ್ದಾರೆ.
ಪಾಲಿಕೆ ಸದಸ್ಯನ ಬಂಧನ: ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಿಂದೇಟು ಹಾಕಿದ್ದಲ್ಲದೆ, ಸಂಘಟನೆಗಳ ನಡುವೆ ಶತ್ರುತ್ವ ಪ್ರಚೋದಿಸುವಂತೆ ನಡೆದುಕೊಂಡ ಕಾರಣಕ್ಕಾಗಿ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಸದಸ್ಯ ಸಯ್ಯದ್ ಮತೀನ್ ಸಯ್ಯದ್ ರಶೀದ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಪಾಲಿಕೆ ವತಿಯಿಂದ ಸಂತಾಪ ಸಭೆ ಕರೆಯಲಾಗಿತ್ತು. ಆಲ್ ಇಂಡಿಯಾ ಮಜಿ ಲಿಸ್-ಎ-ಇತ್ತೆ ಹಾ ದುಲ್ ಮುಸ್ಲಿ ಮೀನ್ (ಎಐಎಂಐಎಂ) ಪಕ್ಷದ ನಾಯಕರೂ ಆಗಿರುವ ರಶೀದ್ ಸಹ ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ಪಾಲಿಕೆ ವತಿಯಿಂದ ಶ್ರದ್ಧಾಂಜಲಿಸಲ್ಲಿಸುವ ಠರಾವು ಮಂಡಿಸಲಾಗಿತ್ತು. ಈ ಠರಾವಿಗೆ ವಿರೋಧ ವ್ಯಕ್ತಪಡಿಸಿದ ರಶೀದ್, ವಾಜಪೇಯಿ ವಿರುದ್ಧ ಮಾತನಾಡಿದರು. ಆಗ, ಪಾಲಿಕೆಯ ಬಿಜೆಪಿ ಸದಸ್ಯರು ವಿರೋಧಿಸಿದರು. ಇದು ಗಲಾಟೆಗೆ ಕಾರಣವಾಗಿ, ರಶೀದ್ ಮೇಲೆ ಬಿಜೆಪಿ ಸದಸ್ಯರಿಂದ ಹಲ್ಲೆಯೂ ನಡೆದಿತ್ತು. ಹೀಗಾಗಿ, ಪೊಲೀಸರು ಇದೀಗ ರಶೀದ್ ಹಾಗೂ ಹಲ್ಲೆ ನಡೆಸಿದ ಬಿಜೆಪಿಯ ಸದಸ್ಯರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ