ಮೋದಿ ಸರಕಾರದ ನೀತಿಗೆ ರಾಜನ್ ಮೆಚ್ಚುಗೆ ಮಾತು
Team Udayavani, Aug 25, 2018, 6:00 AM IST
ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ವಿತ್ತೀಯ ಕೊರತೆ ಕ್ರಮಗಳಿಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ವಿತ್ತ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ(ಸಿಎಡಿ)ಯನ್ನು ನಿರ್ವಹಿಸಬೇಕಿದೆ ಹಾಗೂ ಸೂಕ್ಷ್ಮ ಆರ್ಥಿಕತೆಯ ಮೇಲೆ ಕಣ್ಣಿಡಬೇಕಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ತೈಲ ದರ ಏರಿಕೆಯಾಗಿರುವುದರಿಂದಾಗಿ ಈ ವಿತ್ತ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಶೇ.2.8ಕ್ಕೆ ಏರಿಕೆಯಾಗಲಿದೆ ಎಂದು ಹಲವು ವಿತ್ತ ವಿಶ್ಲೇಷಣಾ ಸಂಸ್ಥೆಗಳು ಈಗಾಗಲೇ ಊಹಿಸಿವೆ. ಸರಕಾರ ಚಾಲ್ತಿ ಖಾತೆ ಕೊರತೆ ಗುರಿಯನ್ನು ತಲುಪುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ರೂಪಾಯಿ ಚಿಂತೆಗೀಡು ಮಾಡುವ ಮಟ್ಟಕ್ಕೆ ಮೌಲ್ಯ ಕಳೆದುಕೊಂಡಿಲ್ಲ. ಡಾಲರ್ ಮೌಲ್ಯ ಹೆಚ್ಚಿರುವುದರಿಂದ ಹೀಗಾಗಿದೆ. ಯುಪಿಎ ಅವಧಿಯಲ್ಲಿ ಕೈಗೊಂಡ ವಿವಾದಿತ 80:20 ಚಿನ್ನ ಆಮದು ಯೋಜನೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ರಾಜನ್, ಆಗಿನ ವಿತ್ತೀಯ ಪರಿಸ್ಥಿತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು