ನೋವಿನ ಮಧ್ಯೆಯೇ ನಲಿವಿನ ಮೊಗ್ಗು : ಓಣಂ ಸರಳ ಆಚರಣೆ


Team Udayavani, Aug 26, 2018, 6:00 AM IST

z-26.jpg

ಕೊಚ್ಚಿ: ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ತಿರುಓಣಂ ಹಬ್ಬದ ಆಚರಣೆಯಲ್ಲಿ ಶನಿವಾರ ಉತ್ಸಾಹ ಕಡಿಮೆ ಕಂಡುಬಂದಿತು. ನೆರೆಪೀಡಿತ ಭಾಗಗಳಲ್ಲಿ ಜನರು ಓಣಂ ಆಚರಿಸಿಲ್ಲ. ಇನ್ನು ಕೆಲವು ಪರಿಹಾರ ಕೇಂದ್ರಗಳಲ್ಲಿ ಸಣ್ಣದೊಂದು ಪೂಕಳಂ ಬಿಡಿಸಿ ಆಚರಿಸಿದರು. ಉಳಿದಂತೆ ಹಲವರು ದೇವಸ್ಥಾನಕ್ಕೆ ತೆರಳಿ ಸರಳವಾಗಿ ಹಬ್ಬ ಆಚರಿಸಿದರು.

ಈ ಸಾಂಪ್ರದಾಯಿಕ ಸುಗ್ಗಿ ಹಬ್ಬದಲ್ಲಿ ಹಿಂದಿನ ವೈಭವವಿರಲಿಲ್ಲ. ಕಳೆದ ಓಣಂನ ಸವಿ ಸವಿ ನೆನಪುಗಳು ಮೊಗದಲ್ಲಿ ಮಂದಹಾಸ ತರಲಿಲ್ಲ. ಆದರೆ, ಪ್ರವಾಹದ ತೀವ್ರ ಬಾಧೆಗೊಳಗಾಗಿರುವ ಅಲ ಪ್ಪುಳ ಜಿಲ್ಲೆಯಲ್ಲಿ ಇಂಥ ಉತ್ಸಾಹ ಕಂಡು ಬಂತು. ಎಲ್ಲಾ ಕಳೆದುಕೊಂಡಿರುವ ದುಃಖದ ಛಾಯೆಯಿಂದ ಕೊಂಚ ಹೊರ ಬಂದು, ಕೆಲ ಪ್ರಾಂತ್ಯಗಳ ಜನರು ಜೀವನೋತ್ಸಾಹ ತೋರಿದರು. ಕೊಚ್ಚಿಯ ಪರವೂರು, ಆಲುವ, ಆಂಡಿಪಿಳ್ಳಿಕಾವು ಮೊದಲಾದ ನೆರೆ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು, ಸಮಾಜ ಸೇವಕರು ಅಲ್ಲಿದ್ದವರೊಂದಿಗೆ ಹಬ್ಬ ಆಚರಿಸಿದರು. ಹೊಸ ಬಟ್ಟೆಗಳನ್ನು ವಿತರಿಸಿ ಪಾಯಸ, ಸಿಹಿ ತಿಂಡಿಗಳನ್ನು ನೀಡಲಾಯಿತು.

ಇಲ್ಲೇ ಸಂಭ್ರಮ
“ಪ್ರತೀ ವರ್ಷವೂ ಅಂಗಳದಲ್ಲಿ ಚಿಕ್ಕದಾಗಿ ಪೂಕಳಂ ಹಾಕಿ ಮನೆ ಮಂದಿ ಯೆಲ್ಲಾ ಸಂಭ್ರಮದಿಂದ ಹಬ್ಬ ಆಚರಿಸು ತ್ತಿದ್ದೆವು. ಈ ಬಾರಿ ಹಾಗಾಗಿ ಅಲ್ಲಿಗೆ ಹೋಗದೇ ಈ ಪರಿಹಾರ ಕೇಂದ್ರ ದಲ್ಲೇ ಹಬ್ಬ ಆಚರಿ ಸುವಂತಾ ಗಿದೆ. ಇರಲಿ, ಇಷ್ಟಾದರೂ ಸಿಕ್ಕಿತಲ್ಲ’ ಎಂದು ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳುತ್ತಾರೆ ಮಾಳ ನಿವಾಸಿ 78 ವರ್ಷದ ತುಳಸಿಯಮ್ಮ.

ಅಂಗೈಯಲ್ಲಿ ಇದ್ದದ್ದರಲ್ಲೇ ಅರಮನೆ ಕಟ್ಟಿಕೊಂಡರು
ಶಿಬಿರಗಳಲ್ಲಿರುವ ಮಹಿಳೆಯರು ಶಿಬಿರದ ಅಕ್ಕ ಪಕ್ಕದ ಕೆಲ ಗಿಡಗಳಲ್ಲಿ ಅರಳಿದ್ದ ಹೂವುಗಳನ್ನು ಬಿಡಿಸಿ ತಂದು, ಬಾಗಿಲಿಗೆ ಮುಡಿಸಿ ಶೃಂಗಾರ ಮಾಡಿದರು. ಮತ್ತದೇ ಹೂವುಗಳಿಂದ ಅಲಂಕಾರ ಮಾಡಿದರು. ಎಲ್ಲರೂ ಒಟ್ಟಾಗಿ ಲಭ್ಯವಿರುವ ದಿನಸಿಗಳಲ್ಲೇ ಖಾದ್ಯ ತಯಾರಿಸಿ ತಿಂದು ತೃಪ್ತಿ ಕಂಡು ಕೊಂಡರು. ಹಲವಾರು ಜಿಲ್ಲೆಗಳ ಶಾಲೆ, ಕಾಲೇಜು, ಕನ್ವೆನನ್‌ ಹಾಲ್‌ಗಳು, ಚರ್ಚ್‌, ಮಸೀದಿಗಳಲ್ಲಿಯೂ ಓಣಂ ಆಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ತಮ್ಮಲ್ಲಿ ಇದ್ದದ್ದನ್ನೇ ಬಳಸಿಕೊಂಡು ಬದುಕಿನಲ್ಲಿ ಸಂಭ್ರಮವನ್ನು ತುಂಬಿಕೊಂಡದ್ದು ಎಲ್ಲೆಲ್ಲೂ ಕಂಡು ಬಂದಿತು. 

ಪೂಕಳಂ ಇಲ್ಲದೆ ಕಳೆಗುಂದಿದ ದೇಗುಲ
ಇತಿಹಾಸ ಪ್ರಸಿದ್ಧ ತೃಶ್ಶೂರಿನ ವಡಕ್ಕುನಾಥನ್‌ ದೇವಸ್ಥಾನದಲ್ಲಿ ಪ್ರತೀ ವರ್ಷವೂ ಬೃಹತ್ತಾದ, ಆಕರ್ಷಕ ಪೂಕಳಂ ಹಾಕುವುದು ವಾಡಿಕೆ. ಇದನ್ನು ನೋಡಲೆಂದೇ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇದು ರಾಜ್ಯದ ಓಣಂ ಆಕರ್ಷಣೆಯಲ್ಲಿ ಒಂದು. ಸ್ಥಳೀಯ ರಾಜ್ಯ ಸರಕಾರ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೂಕಳಂ ಇಲ್ಲದೆ ದೇವಸ್ಥಾನದ ಹಿಂಬದಿಯ ಆವರಣ ಕಳೆಗುಂದಿತ್ತು. 

ಅಳ ಪ್ಪುಳದಲ್ಲಿ ಕೆಲ ದಿನಗಳಿಂದ ನಿರಾಶ್ರಿತರ ಕೇಂದ್ರ ವಾಗಿರುವ ಮಸೀದಿಯೊಂದರಲ್ಲಿ ಓಣಂ ಆಚರಿಸಲಾಯಿತು. ವಿಶೇಷ ಖಾದ್ಯವಾದ ಅವಿಯಾಳ್‌, ಸಾಂಬಾರ್‌, ಪಾಯಸಂ ತಯಾರಿಸಿ ನಿರಾಶ್ರಿತರಿಗೆ ಹಂಚಲಾಯಿತು. ಕೊಚ್ಚಿಯ ನಿರಾಶ್ರಿತರ ಶಿಬಿರದಲ್ಲಿ ಓಣಂ ಪಟ್ಟು, ವಿಶೇಷ ಅಡುಗೆ ಮಾಡಲಾಗಿತ್ತು.

  ಪ್ರಜ್ಞಾ ಶೆಟ್ಟಿ   ಸತೀಶ್‌ ಇರಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.