ಪಾಕ್ ಬೊಗಳೆಗೆ ಭಾರತ ತಿರುಗೇಟು
Team Udayavani, Sep 1, 2018, 6:00 AM IST
ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ ಸಂಬಂಧ ನಡೆದ ಮಾತುಕತೆಯ ಕುರಿತು ಪಾಕಿಸ್ತಾನ ಬಿಟ್ಟಿರುವ ಬೊಗಳೆಯನ್ನು ಭಾರತ ಖಂಡಿಸಿದ್ದು ವಾಸ್ತವ ಸಂಗತಿಯನ್ನು ತೆರೆದಿಟ್ಟಿದೆ. ಸಿಂಧೂ ನದಿಯುದ್ದಕ್ಕಿರುವ ಎರಡೂ ದೇಶಗಳ ಜಲವಿದ್ಯುತ್ ಯೋಜನೆಗಳಿಗೆ ಪರಸ್ಪರ ದೇಶಗಳ ನಿಯೋಗ ತೆರಳಲು ಗುರುವಾರ ಮುಕ್ತಾಯಗೊಂಡ ಸಭೆಯಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು. ಆದರೆ ಪಾಕಿಸ್ತಾನ ಪತ್ರಿಕಾಗೋಷ್ಠಿ ನಡೆಸಿ, ಭಾರತದ ಜಲವಿದ್ಯುತ್ ಯೋಜನೆಗಳನ್ನಷ್ಟೇ ಪಾಕಿಸ್ತಾನ ತಪಾಸಣೆ ನಡೆಸಲು ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಯಿತು. ಇದು ತನ್ನ ಗೆಲುವು ಎಂದು ಸುಳ್ಳು ಹೇಳಿತ್ತು.
ಪಾಕಿಸ್ತಾನದ ಹುಸಿವಾದವನ್ನು ತಳ್ಳಿಹಾಕಿರುವ ಭಾರತದ ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಎರಡು ದಿನಗಳ ಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಲ್ ದುಲ್ (1000 ಮೆವ್ಯಾ) ಹಾಗೂ ಲೋವರ್ ಕಲಾನಿ (48 ಮೆವ್ಯಾ) ಸಹಿತ ವಿವಿಧ ಜಲವಿದ್ಯುತ್ ಯೋಜನೆಗಳ ಅನುಷ್ಠಾನದ ಕುರಿತು ತಾಂತ್ರಿಕ ಚರ್ಚೆಗಳು ನಡೆದವು. ಎರಡೂ ದೇಶಗಳು ಸಿಂಧೂ ಕಣಿವೆಯಲ್ಲಿರುವ ಪರಸ್ಪರರ ಯೋಜನೆಗಳನ್ನು ವೀಕ್ಷಿಸಲು ಒಪ್ಪಿಕೊಂಡಿವೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ