ಪಾಕ್ ಬೊಗಳೆಗೆ ಭಾರತ ತಿರುಗೇಟು
Team Udayavani, Sep 1, 2018, 6:00 AM IST
ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ ಸಂಬಂಧ ನಡೆದ ಮಾತುಕತೆಯ ಕುರಿತು ಪಾಕಿಸ್ತಾನ ಬಿಟ್ಟಿರುವ ಬೊಗಳೆಯನ್ನು ಭಾರತ ಖಂಡಿಸಿದ್ದು ವಾಸ್ತವ ಸಂಗತಿಯನ್ನು ತೆರೆದಿಟ್ಟಿದೆ. ಸಿಂಧೂ ನದಿಯುದ್ದಕ್ಕಿರುವ ಎರಡೂ ದೇಶಗಳ ಜಲವಿದ್ಯುತ್ ಯೋಜನೆಗಳಿಗೆ ಪರಸ್ಪರ ದೇಶಗಳ ನಿಯೋಗ ತೆರಳಲು ಗುರುವಾರ ಮುಕ್ತಾಯಗೊಂಡ ಸಭೆಯಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು. ಆದರೆ ಪಾಕಿಸ್ತಾನ ಪತ್ರಿಕಾಗೋಷ್ಠಿ ನಡೆಸಿ, ಭಾರತದ ಜಲವಿದ್ಯುತ್ ಯೋಜನೆಗಳನ್ನಷ್ಟೇ ಪಾಕಿಸ್ತಾನ ತಪಾಸಣೆ ನಡೆಸಲು ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಯಿತು. ಇದು ತನ್ನ ಗೆಲುವು ಎಂದು ಸುಳ್ಳು ಹೇಳಿತ್ತು.
ಪಾಕಿಸ್ತಾನದ ಹುಸಿವಾದವನ್ನು ತಳ್ಳಿಹಾಕಿರುವ ಭಾರತದ ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಎರಡು ದಿನಗಳ ಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಲ್ ದುಲ್ (1000 ಮೆವ್ಯಾ) ಹಾಗೂ ಲೋವರ್ ಕಲಾನಿ (48 ಮೆವ್ಯಾ) ಸಹಿತ ವಿವಿಧ ಜಲವಿದ್ಯುತ್ ಯೋಜನೆಗಳ ಅನುಷ್ಠಾನದ ಕುರಿತು ತಾಂತ್ರಿಕ ಚರ್ಚೆಗಳು ನಡೆದವು. ಎರಡೂ ದೇಶಗಳು ಸಿಂಧೂ ಕಣಿವೆಯಲ್ಲಿರುವ ಪರಸ್ಪರರ ಯೋಜನೆಗಳನ್ನು ವೀಕ್ಷಿಸಲು ಒಪ್ಪಿಕೊಂಡಿವೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ