ಪ್ರಧಾನಿಗೆ ಭದ್ರತಾ ಬೆದರಿಕೆ ಇದೆ ಎನ್ನುವುದು ಕೇವಲ ಬೊಗಳೆ: ಶಿವಸೇನೆ
Team Udayavani, Sep 3, 2018, 7:15 PM IST
ಮುಂಬಯಿ : ”ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಬೆದರಿಕೆ ಇದೆ ಎಂಬುದು ಕೇವಲ ಒಂದು ಸಂಚಿನ ವ್ಯಾಖ್ಯಾನವಾಗಿದೆ. ಮಾನವ ಹಕ್ಕು ಮತ್ತು ಸಮಾಜ ಕಾರ್ಯಕರ್ತರ ಬಂಧನದ ಬಗ್ಗೆ ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡಿರುವುದೆಲ್ಲ ಬೊಗಳೆ ” ಎಂದು ಶಿವಸೇನೆ ಹೇಳಿದೆ.
”ಪ್ರಜಾಸತ್ತೆಯಲ್ಲಿ ಯಾವುದೇ ಒಂದು ಸರಕಾರವನ್ನು ಬೀಳಿಸುವುದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲರು ಅಲ್ಲ” ಎಂದು ಶಿವಸೇನೆ, ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರಕ್ಕೆ ಟಾಂಗ್ ನೀಡಿದೆ.
ತನ್ನ ಸಾಮನಾ ಮುಖವಾಣಿಯಲ್ಲಿ ಶಿವಸೇನೆ, “ತಥಾಕಥಿತ ಮಾವೋವಾದಿಗಳು ಕೇಂದ್ರದಲ್ಲಿನ ಹಾಲಿ ಸರಕಾರವನ್ನು ಬೀಳಿಸಲು ಮುಂದಾಗಿದ್ದಾರೆ’ ಎಂದು ಹೇಳುವುದನ್ನು BJP ನಿಲ್ಲಿಸಬೇಕು; ಏಕೆಂದರೆ ಇದೊಂದು ಮೂರ್ಖ ಹೇಳಿಕೆಯಾಗಿದೆ; ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದವನ್ನು ಬೀಳಿಸಿದ್ದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲೈಟ್ಗಳು ಅಲ್ಲ; ದೇಶದಲ್ಲಿ ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಂದಲೇ ಸರಕಾರವನ್ನು ಬದಲಾಯಿಸುತ್ತಾ ಬಂದಿದ್ದಾರೆ ಹೊರತು ಅನ್ಯರಲ್ಲ ಎಂದು ಶಿವಸೇನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ