5ನೇ ಬಾರಿಗೆ ಲೋಕಪಾಲ ಸಭೆಗೆ ಖರ್ಗೆ ಗೈರು
Team Udayavani, Sep 5, 2018, 6:05 AM IST
ಹೊಸದಿಲ್ಲಿ: ಮಂಗಳವಾರ ನಡೆದ ಲೋಕಪಾಲ ಆಯ್ಕೆ ಸಮಿತಿ ಸಭೆಯನ್ನೂ ಕಾಂಗ್ರೆಸ್ ಬಹಿಷ್ಕರಿಸಿದೆ. ಪ್ರಸಕ್ತ ವರ್ಷ ಸತತ 5ನೇ ಬಾರಿಗೆ ಸಭೆಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದು, ಸಮಿತಿಯಲ್ಲಿ ಕಾಂಗ್ರೆಸ್ಗೆ ಪೂರ್ಣ ಪ್ರಮಾಣದ ಸದಸ್ಯತ್ವ ನೀಡುವವರೆಗೂ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಖರ್ಗೆ ಸ್ಪಷ್ಟಪಡಿಸಿದ್ದಾರೆ.