ಕ್ಷಮೆ ಕೋರಲಿದೆ ಇತಿಹಾಸ


Team Udayavani, Sep 7, 2018, 6:00 AM IST

38.jpg

ಹೊಸದಿಲ್ಲಿ:  “ಐಪಿಸಿ 377ನೇ ಸೆಕ್ಷನ್‌, ಸಲಿಂಗಿಗಳ ತೇಜೋವಧೆಗೆ ಈ ಕಾನೂನು ಅಸ್ತ್ರವಾಗಿ ಬಳಕೆಯಾಗಿದ್ದು ವಿಪರ್ಯಾಸ. ಕಾನೂನಿನ ಹೆಸರಿನಲ್ಲಿ ಸಲಿಂಗಿಗಳ ಮೇಲಾಗಿರುವ ದೌರ್ಜನ್ಯಗಳಿಗಾಗಿ ಇತಿಹಾಸ ಅವರಲ್ಲಿ ಕ್ಷಮೆ ಕೋರುತ್ತದೆ. ಗತಿಸಿದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಮುಂಬರುವ ಭವಿಷ್ಯವನ್ನು ಸುಭದ್ರವಾಗಿಸಬಹುದು’ – ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡುವ ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ ಮಾತುಗಳಿವು.  

ತೀರ್ಪಿನ ಜತೆಗೆ ಸಮಾಜದ ಓರೆ ಕೋರೆಯನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ನ್ಯಾಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಸಲಿಂಗಿಗಳ ಭವಿಷ್ಯವನ್ನು ಸುಭದ್ರಗೊಳಿಸುವ ಬಗ್ಗೆ ಮಾತನಾಡಿದ ನ್ಯಾ. ಚಂದ್ರಚೂಡ್‌, “ಯಾರ್ಯಾರ ಜತೆಯಲ್ಲಿ ಲೈಂಗಿಕ ಸಂಬಂಧ ಹೊಂದಬೇಕೆಂಬುದು ಆಯಾ ವ್ಯಕ್ತಿಗಳ ತೀರಾ ಖಾಸಗಿ ವಿಚಾರ. ಇದನ್ನು ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ. ಸಮಾಜದಲ್ಲಿ ಒಬ್ಬನೇ ಒಬ್ಬ ಸಲಿಂಗಿ ಇದ್ದರೂ ಅವನ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ಕಿತ್ತುಕೊಳ್ಳಲು ನ್ಯಾಯಪೀಠ ಅವಕಾಶ ನೀಡುವುದಿಲ್ಲ’ ಎಂದರು. 

ಇನ್ನು, ಸಿಜೆಐ ದೀಪಕ್‌ ಮಿಶ್ರಾ ತಮ್ಮ ತೀರ್ಪಿನ ವೇಳೆ, “ನಾನು ನಾನೇ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿ’ ಎಂದು 
ಜರ್ಮನಿಯ ಚಿಂತಕನ ಮಾತು ಸಲಿಂಗಿಗಳ ವಿಚಾರದಲ್ಲಿ ಹೇಳಬೇಕಿದೆ. ಸಲಿಂಗಿಗಳ ಬಗ್ಗೆ ಸಮಾಜದಲ್ಲಿ ಇರುವ ಪೂರ್ವ ಗ್ರಹ ಚಿಂತನೆಗಳಿಗೆ ಇತಿಶ್ರೀ ಹಾಡಬೇಕಿದೆ. ಪ್ರತಿಯೊಂದು ಮೋಡದಲ್ಲೂ ಕಾಮನ ಬಿಲ್ಲನ್ನು ಕಾಣುವಂಥ ದೃಷ್ಟಿ ಕೋನ ತರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರನ್ನು ಸಬಲೀಕರಣಗೊಳಿಸಬೇಕಿದೆ” ಎಂದು ಆಶಿಸಿದರು. 

ಇನ್ನು, ನ್ಯಾ. ನಾರಿಮನ್‌ ಅವರು, “ನ್ಯಾಯ ಪೀಠ ಇಂದು ನೀಡಿರುವ ತೀರ್ಪಿನ ಬಗ್ಗೆ ಸರಕಾರ ಹಾಗೂ ಮಾಧ್ಯಮಗಳು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಈ ಮೂಲಕ ಸಾರ್ವಜನಿಕರಲ್ಲಿ ಸಲಿಂಗಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಎಂಬುದು ಎಲ್ಲರಿಗೂ ಮನಗಾಣುವಂತೆ ಮಾಡಬೇಕು” ಎಂದರು. ಇನ್ನು, ನ್ಯಾಯಪೀಠದಲ್ಲಿದ್ದ ಮತ್ತೂಬ್ಬ ನ್ಯಾಯ ಮೂರ್ತಿ ಖಾನ್ವಿಳ್ಕರ್‌, “”ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಾವಿಗೆ ಸಮಾನ. ಹಾಗಾಗಿ, ಸಲಿಂಗಿಗಳಿಗೆ ಅವರಿಗೆ ಸಿಗಬೇಕಾದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕೊಡಬೇಕಿದೆ” ಎಂದರು. 

ವಿಶ್ವ ಸಂಸ್ಥೆ ಸ್ವಾಗತ
ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಶ್ವ ಸಂಸ್ಥೆ ಸ್ವಾಗತಿಸಿದೆ. ಎಲ್‌ಜಿಬಿಟಿಐ ಸಮುದಾಯಕ್ಕೆ ಅವರ ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ಇದು ಮೊದಲ ಹೆಜ್ಜೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. 

ಈ ಮೊದಲೇನಿತ್ತು? 
1864ರಲ್ಲಿ ರೂಪುಗೊಂಡಿದ್ದ ಐಸಿಪಿ ಸೆಕ್ಷನ್‌ 377ರಲ್ಲಿ ಸಲಿಂಗ ಕಾಮವು ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖೀಸಲಾಗಿತ್ತ ಲ್ಲದೆ, ಈ ಅಪರಾಧ ಎಸಗಿದವರಿಗೆ ಗರಿಷ್ಠ 10 ವರ್ಷಗಳ ಜೈಲು ವಾಸ ವಿಧಿಸುವ ಅವಕಾಶವಿತ್ತು. 

26ನೇ ದೇಶವಾಗಿ ಭಾರತ
ಸಲಿಂಗಿಗಳಿಗೆ ಕಾನೂನು ಮಾನ್ಯತೆ ನೀಡುವ ಮೂಲಕ ಭಾರತ, ಈ ಐತಿಹಾಸಿಕ ತೀರ್ಮಾನ ಕೈಗೊಂಡಿರುವ ವಿಶ್ವದ 26ನೇ ದೇಶವಾಗಿ ಹೊರಹೊಮ್ಮಿದೆ.  

ವ್ಯಾಪಕ ಸ್ವಾಗತ: ಕೇರಳದ ಸಲಿಂಗಿ ಸಂಘವು  ಸೆ. 6ರ  ಭಾರತದ 2ನೇ ಸ್ವಾತಂತ್ರ್ಯ ದಿನವೆಂದು ಘೋಷಿಸಿದ್ದರೆ, ದಿಲ್ಲಿಯ ಕಾರ್ಯಕರ್ತರು, ಎಲ್‌ಜಿಬಿಟಿಕ್ಯು ಇನ್ನು ಕತ್ತಲೆಯಲ್ಲಿ ಬದುಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮನ ಮುಟ್ಟುವಂತಿದೆ
ಕಾಂಗ್ರೆಸ್‌ ತೀರ್ಪಿನ ಬಗ್ಗೆ ಟ್ವೀಟ್‌ ಮಾಡಿದ್ದು  “ಶತಮಾನಗಳ ವಸಾಹತು ಶಾಹಿ ಸಂಸ್ಕೃತಿಯೊಂದರಿಂದ ರೂಪುಗೊಂಡಿದ್ದ ಕಾನೂನೊಂದಕ್ಕೆ ತಿದ್ದು ಪಡಿ ತಂದಿದೆ. ಇದರಿಂದ ಸಲಿಂಗಿಗಳ ಹಕ್ಕುಗಳ ರಕ್ಷಣೆಯಾಗಿರುವುದರಲ್ಲದೆ, ಉದಾರವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ’ ಎಂದು ಬರೆದುಕೊಂಡಿದೆ

ಪ್ರಕರಣದ ಹಿನ್ನೋಟ
2001: ಸಮ್ಮತಿಯ ಸಲಿಂಗಕ್ಕೆ ಕಾನೂನು ಮಾನ್ಯತೆ ನೀಡುವಂತೆ ನಾಝ್ ಫೌಂಡೇ ಷನ್‌ನಿಂದ ಅರ್ಜಿ
ಸೆ. 24, 2004:  ನಾಝ್ ಸಂಸ್ಥೆಯ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌
ಡಿಸೆಂಬರ್‌, 2004: ಸಲಿಂಗ ಕಾಮ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ. 
ಏ. 3, 2006: ಪ್ರಕರಣದ ಮರು ವಿಚಾರಣೆಗೆ ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ. 
ಅ. 4, 2006: ಮಾನ್ಯತೆ ನೀಡುವುದರ ವಿರುದ್ಧ ಬಿಜೆಪಿ ನಾಯಕ ಬಿ.ಪಿ. ಸಿಂಘಲ್‌ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ
ಜು. 2, 2009: ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್‌. 
ಡಿ. 11, 2013: 2009ರಲ್ಲಿ ದಿಲ್ಲಿ ಹೈಕೋರ್ಟ್‌ ಆದೇಶ ಸುಪ್ರೀಂನಿಂದ ರದ್ದು
ಏ. 3, 2013: ಕ್ಯುರೇ ಟಿವ್‌ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ. 
ಫೆ. 2, 2016: ಕ್ಯುರೇಟಿವ್‌ ಅರ್ಜಿಗಳ ವಿಚಾರಣೆ ಐವರು ನ್ಯಾಯ ಮೂರ್ತಿಗಳ ಪೀಠಕ್ಕೆ ಹಸ್ತಾಂತರ. 
ಆ. 24, 2017: ಲೈಂಗಿಕ ಬಯಕೆಗಳು ಆಯಾ ವ್ಯಕ್ತಿಯ ಖಾಸಗಿತನದ ವಿಚಾರ ಹಾಗೂ ಇದೊಂದು ಮೂಲ ಭೂತ ಹಕ್ಕು ಎಂದ ಸುಪ್ರೀಂ ಕೋರ್ಟ್‌. 
ಜ. 8, 2018: 2013ರಲ್ಲಿ  ನೀಡಿದ್ದ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್‌ ನಿರ್ಧಾರ. 
ಜು. 11, 2018: ಪ್ರಕರಣದ ತೀರ್ಪು ಸರ್ವೋತ್ಛ ನ್ಯಾಯಾಲಯದ ಮರ್ಜಿಗೆ ಬಿಟ್ಟ ವಿಚಾರವೆಂದ ಕೇಂದ್ರ ಸರಕಾರ. 
ಜು. 17, 2018: ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ. 
ಸೆ. 6, 2018: ಐಪಿಸಿ 377 ಸೆಕ್ಷ ನ್‌ನ ಕೆಲವು ಅಂಶಗಳನ್ನು ರದ್ದುಗೊಳಿಸಿ, ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್‌.

ಲವ್‌ ಈಸ್‌ ಲವ್‌. ನಮ್ಮ ದೇಶ ದಲ್ಲಿ ಈದಿನ ಮಹತ್ವದ ದಿನ. ಇಂಥದ್ದೊಂದು ವಿಶೇಷ ತೀರ್ಪಿಗಾಗಿ ಹೋರಾಡಿದ ಎಲ್ಲರಿಗೂ ಧನ್ಯ ವಾದ. 
ಆಲಿಯಾ ಭಟ್‌, ನಟಿ

ಈ ತೀರ್ಪು ನಾಗರಿಕರಿಗೆ ಸಿಕ್ಕಿದ ಸ್ವಾತಂತ್ರ್ಯ. ಕೇವಲ ಒಂದು ವರ್ಗಕ್ಕೆ ಅಲ್ಲ. ಹಿಂದಿನ ಸಂದರ್ಭಗಳಲ್ಲಿ ನಾನು ಹೇಳಿದ್ದ ಮಾತುಗಳನ್ನು ಪುಷ್ಟೀಕರಿಸಿದಂತಿದೆ. 
ಶಶಿ ತರೂರ್‌, ಕಾಂಗ್ರೆಸ್‌ ನಾಯಕ

ಐಪಿಸಿ ಸೆಕ್ಷನ್‌ 377ರ ಕಿರಿಕಿರಿ ಅನುಭವಿಸಿದವರಿಗೆ ಅದರಿಂದ ಇಂದು ಮುಕ್ತಿ ಸಿಕ್ಕಿದೆ. 
ಅಕ್ಷಯ್‌ ಕುಮಾರ್‌, ನಟ

ತೀರ್ಪಿನಿಂದ ಉಸಿರುಗಟ್ಟುತ್ತಿರುವವರಿಗೆ ಆಮ್ಲಜನಕ ನೀಡಿದಂತಾಗಿದೆ. ಇದೊಂದು ಐತಿಹಾಸಿಕ ತೀರ್ಪು. ಎಲ್ಲರಿಗೂ ಸಮಾನ ಹಕ್ಕು ನೀಡಿದ್ದು ಹೆಮ್ಮೆಯೆನಿಸುತ್ತಿದೆ. 
ಕರಣ್‌ ಜೋಹರ್‌, ನಿರ್ದೇಶಕ 

ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಾರ್ಹವಾದರೂ, ನಿಸರ್ಗದತ್ತವಾಗಿ ಮೂಡುವ ಸಂಬಂಧಗಳಿಗಷ್ಟೇ ಈ ಸಮಾಜ ಮಾನ್ಯತೆ ನೀಡುತ್ತದೆ. ಈ ಬಗ್ಗೆ ಮತ್ತಷ್ಟು ಚರ್ಚೆಗಳಾಗಬೇಕಿದೆ
ಅರುಣ್‌ ಕುಮಾರ್‌, ಆರ್‌ಎಸ್‌ಎಸ್‌ ಮುಖಂಡ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.