ವರ್ಗ ಮಾಡಿದಲ್ಲಿಗೆ ಹೋಗಿ
Team Udayavani, Sep 8, 2018, 10:31 AM IST
ಹೊಸದಿಲ್ಲಿ: ದೇಶದ ಯಾವುದೇ ಮೂಲೆಗೆ ವರ್ಗಾವಣೆ ಮಾಡಿದರೂ ತೆರಳಬೇಕು. ಕರ್ತವ್ಯಕ್ಕೆ ಸೇರುವಾಗಲೇ ಅದೇ ರೀತಿ ಪ್ರಮಾಣ ವಚನ ಸ್ವೀಕರಿಸುತ್ತೀರಿ ಎಂಬುದಾಗಿ ಸೇನೆಯ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಆರ್ಮಿ ಸರ್ವೀಸ್ ಕಾಪ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿದ ಮೂವರು ಅಧಿಕಾರಿಗಳು ಸುಪ್ರೀಂ ಮೊರೆ ಹೋಗಿದ್ದರು. ತೀರ್ಪು ನೀಡಿದ ನ್ಯಾಯಪೀಠ, ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಮಾಡಿದಾಗ ಅದನ್ನು ಪ್ರಶ್ನಿಸುವುದನ್ನು ತಿರಸ್ಕರಿಸಿದೆ. ವರ್ಗಾವಣೆ ಹಾಗೂ ನಿಯೋಜನೆಯು ಕರ್ತವ್ಯದ ಭಾಗ. ಇಚ್ಛೆಗೆ ಅನುಗುಣವಾಗಿ ವರ್ಗ ಮಾಡಲಾಗದು ಎಂದಿದೆ.