ಮುಂಬಯಿಯಲ್ಲಿ HDFC ಉಪಾಧ್ಯಕ್ಷ ನಾಪತ್ತೆ; ಪರಿತ್ಯಕ್ತ ಕಾರು ಪತ್ತೆ
Team Udayavani, Sep 8, 2018, 12:28 PM IST
ಮುಂಬಯಿ : ಎಚ್ ಡಿ ಎಫ್ ಸಿ ಬ್ಯಾಂಕಿನ ಉಪಾಧ್ಯಕ್ಷ ಸಿದ್ಧಾರ್ಥ ಕಿರಣ್ ಸಾಂಘವಿ ಅವರು ಸೆ.5ರ ಬುಧವಾರದಿಂದ ನಗರದ ಕಮಲಾ ಮಿಲ್ಸ್ ಪ್ರದೇಶದಲ್ಲಿನ ತಮ್ಮ ಕಚೇರಿಯಿಂದ ನಾಪತ್ತೆಯಾಗಿದ್ದು ಅವರನ್ನು ಹುಡುಕುವ ಪೊಲೀಸರ ಯತ್ನಕ್ಕೆ ಈ ತನಕ ಯಾವುದೇ ಯಶಸ್ಸು ಸಿಕ್ಕಿಲ್ಲ ಎಂದು ವರದಿಯಾಗಿದೆ.
ಸೆ.6ರ ಗುರುವಾರದಂದು ನವೀ ಮುಂಬಯಿಯ ಕೋಪರ್ ಖೈರ್ನೆ ಪ್ರದೇಶದಲ್ಲಿ ಸಿದ್ಧಾರ್ಥ ಅವರ ಪರಿತ್ಯಕ್ತ ಕಾರನ್ನು ಪೊಲೀಸರು ಪತ್ತೆ ಮಾಡಿದ್ದರು. ಎನ್ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆಯ ಕೇಸನ್ನು ದಾಖಲಿಸಿಕೊಂಡಿದ್ದರು.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ಸಿದ್ಧಾರ್ಥ ಅವರು ಸೆ.5ರಂದು ಬೆಳಗ್ಗೆ 8.30ಕ್ಕೆ ತಮ್ಮ ಮನೆಯಿಂದ ಆಫೀಸಿಗೆ ಹೋಗಿದ್ದರು; ರಾತ್ರಿ 7.30ಕ್ಕೆ ಅಲ್ಲಿ ಮನೆಗೆ ಹೊರಟಿದ್ದರು. ವರದಿಯ ಪ್ರಕಾರ ನವೀ ಮುಂಬಯಿಯಲ್ಲಿ ಪತ್ತೆಯಾಗಿದ್ದ ಸಿದ್ಧಾರ್ಥ ಅವರ ಪರಿತ್ಯಕ್ತ ಕಾರಿನ ಸೀಟಿನಲ್ಲಿ ರಕ್ತದ ಕಲೆಗಳು ಇದ್ದವು.
ಇನ್ನೊಂದು ವರದಿಯ ಪ್ರಕಾರ ಸಿದ್ಧಾರ್ಥ ಅವರ ಕಾರಿನಲ್ಲಿ ಬೇರೋಬ್ಬ ವ್ಯಕ್ತಿ ಇದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್