ನಕ್ಸಲರಿಗೆ ನಾಯಕತ್ವ ಸಮಸ್ಯೆ
Team Udayavani, Sep 10, 2018, 2:35 AM IST
ಕೋಲ್ಕತ್ತಾ: ನಕ್ಸಲರು ನಾಯಕತ್ವ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ನೀಗಿಸಲು ನಗರದಲ್ಲಿರುವ ಬುದ್ಧಿಜೀವಿ ಯುವಕರನ್ನು ಸೆಳೆಯಲು ಚಿಂತನೆ ನಡೆಸುತ್ತಿದೆ. ಜೊತೆಗೆ, ಬುಡಕಟ್ಟು ಜನಾಂಗೀಯರು, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರನ್ನು ತಳಮಟ್ಟದ ಕಾರ್ಯಕರ್ತರನ್ನಾಗಿ ನೇಮಕ ಮಾಡಲು ಮುಂದಾಗಿದೆ ಎಂದು ನಿಷೇಧಿತ ಸಿಪಿಐ (ಮಾವೋವಾದಿ) ಪಾಲಿಟ್ಬ್ಯೂರೋ ಸದಸ್ಯರೊಬ್ಬರು ತಿಳಿಸಿದ್ದಾರೆ. ಪಕ್ಷದ ಮುಖವಾಣಿ ಲಾಲ್ ಚಿಂಗಾರಿ ಪ್ರಕಾಶನ್ಗೆ ನೀಡಿದ ಸಂದರ್ಶನದಲ್ಲಿ ಪಾಲಿಟ್ಬ್ಯೂರೋ ಸದಸ್ಯ ಪ್ರಶಾಂತ ಬೋಸ್ ಅಲಿಯಾಸ್ ಕಿಶನ್ದಾ ಅವರು ಈ ಮಾಹಿತಿ ನೀಡಿದ್ದಾರೆ ಎಂದು ಸಂದರ್ಶನದ ಪ್ರತಿಯನ್ನು ಉಲ್ಲೇಖೀಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿದ್ಯಾವಂತ ಯುವಕರ ಕೊರತೆಯಿಂದಾಗಿ ಪಕ್ಷಕ್ಕೆ ಎರಡನೇ ಹಂತದ ನಾಯಕರ ಸೃಷ್ಟಿಯೇ ದೊಡ್ಡ ಸವಾಲಾಗಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ನಾವು ಬುಡಕಟ್ಟು ಜನಾಂಗೀಯರು ಮತ್ತು ಪರಿಶಿಷ್ಟ ಜಾತಿಗಳ ಯುವಕರ ತಂಡವನ್ನು ರಚಿಸಿದ್ದೇವೆ. ಆದರೆ, ಅವರ ಶಿಕ್ಷಣದ ಮಟ್ಟ ಕಡಿಮೆಯಿರುವ ಕಾರಣ, ಮಾರ್ಕ್ಸ್ ವಾದದ ತತ್ವಾದರ್ಶಗಳನ್ನು ಅವರಿಗೆ ಅರ್ಥಮಾಡಿಸಿಕೊಡುವುದು ಕಷ್ಟಕರ ವಿಚಾರ ಎಂದೂ 72 ವರ್ಷದ ಕಿಶನ್ದಾ ಹೇಳಿದ್ದಾರೆ.
ಕ್ರಾಂತಿಯ ತತ್ವಗಳಿಗೆ ಬದ್ಧರಾಗಿರುವ ಶಿಕ್ಷಿತ ಯುವಕರು ಮತ್ತು ಬುದ್ಧಿಜೀವಿ ಕಾಮ್ರೇಡ್ಗಳನ್ನು ಎಡಪಂಥೀಯ ಸಂಘರ್ಷ ವಲಯಕ್ಕೆ ಕಳುಹಿಸುವಂತೆ ಸಿಪಿಐ (ಮಾವೋವಾದಿ)ಯ ಎಲ್ಲ ಸಮಿತಿಗಳಿಗೂ ಸೂಚನೆ ನೀಡಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ