ವಧುವಿಗೆ ವಾಟ್ಸಪ್ ಬಳಕೆ ಚಟ; ಕೊನೆಕ್ಷಣದಲ್ಲಿ ಮದುವೆ ರದ್ದು ಮಾಡಿದ ವರ!
Team Udayavani, Sep 10, 2018, 3:37 PM IST
ಲಕ್ನೋ:ಅತೀ ಹೆಚ್ಚು ಸಮಯವನ್ನು ವಾಟ್ಸಪ್ ನಲ್ಲೇ ಕಳೆಯುತ್ತಿದ್ದಾಳೆಂದು ಆರೋಪಿಸಿ ವಧುವಿನ ಜೊತೆಗಿನ ಮದುವೆಯನ್ನೇ ವರ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಮದುವೆ ದಿನದಂದು ಮಧುಮಗ ಖ್ವಾಮರ್ ಅಹ್ಮದ್ ಹಾಗೂ ಕುಟುಂಬಿಕರಿಗಾಗಿ ವಧುವಿನ ಕಡೆಯವರು ಕಾಯುತ್ತಿದ್ದರು. ಆದರೆ ಯಾರೊಬ್ಬರೂ ಬಾರದ ಕಾರಣ, ವಧುವಿನ ಮನೆಯವರು ದೂರವಾಣಿ ಕರೆ ಮಾಡಿದಾಗ, ಮದುವೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದ್ದರಂತೆ. ಅದಕ್ಕೆ ಕೊಟ್ಟ ಕಾರಣ ವಧು ಅತೀ ಹೆಚ್ಚು ಸಮಯ ವಾಟ್ಸಪ್ ನಲ್ಲಿ ಕಳೆಯುತ್ತಾಳೆಂಬುದು!
ಏತನ್ಮಧ್ಯೆ ಇದು ನಿಜವಾದ ಕಾರಣವಲ್ಲ ಎಂದು ವಧುವಿನ ಕುಟುಂಬಸ್ಥರು ದೂರಿದ್ದಾರೆ. ವರನ ಕಡೆಯವರು ವರದಕ್ಷಿಣೆಗೆ ಅತೀಯಾದ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ. ಎಎನ್ ಐ ವರದಿ ಪ್ರಕಾರ, ವರನ ಕಡೆಯವರು 65 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವುದಾಗಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ವಿಪಿನ್ ಟಾಡಾ ಎಎನ್ ಐಗೆ ತಿಳಿಸಿದ್ದಾರೆ. ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ