ಸಲಿಂಗಕಾಮದಿಂದ ನಾಶ: ಪಾದ್ರಿ
Team Udayavani, Sep 11, 2018, 10:47 AM IST
ಕೊಯಮತ್ತೂರು: ಸಲಿಂಗಕಾಮ ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ ನ್ಯಾಯಾಲಯದ ಆವರಣದಲ್ಲೇ ಸಲಿಂಗಕಾಮದ ವಿರುದ್ಧ ಪಾದ್ರಿಯೊಬ್ಬರು ಘೋಷಣೆ ಕೂಗಿದ ಘಟನೆ ನಡೆದಿದೆ.
ಪುಲಿಯಕುಲಂ ಚರ್ಚ್ನ ಫಾದರ್ ಫೆಲಿಕ್ಸ್ ಜೆಬಾಸಿಂಗ್ ಸೋಮವಾರ ಕೋರ್ಟ್ ಆವರಣದಲ್ಲಿ ಏಕಾಏಕಿ ಸುಪ್ರೀಂ ತೀರ್ಪಿನ ವಿರುದ್ಧ ಘೋಷಣೆ ಕೂಗತೊಡಗಿದರು. ಸಲಿಂಗ ವಿವಾಹವು ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ ಎಂದೂ ಬೊಬ್ಬಿಟ್ಟರು.
“ಯಾರೂ ಸಲಿಂಗಕಾಮಕ್ಕೆ ಬೆಂಬಲ ಕೊಡಬೇಡಿ. ಸಲಿಂಗವಿವಾಹ ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತವೆ. ಬೈಬಲ್ನಲ್ಲಿ ಹೇಳಿರುವಂತೆ, ಸೊಡೋಮ್ ಮತ್ತು ಗೊಮೋರಾ ನಗರಗಳು ಸಲಿಂಗಕಾಮಕ್ಕೆ ಅವಕಾಶ ನೀಡಿದ್ದವು. ಅದೇ ಕಾರಣಕ್ಕೆ ಭಗವಂತ ಆ ಎರಡೂ ನಗರಗಳನ್ನು ನಾಶ ಮಾಡಿದ’ ಎಂದು ಪಾದ್ರಿ ಕೂಗಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.