ತಡೆಯಬಹುದಿದ್ದ ಭೀಮಾ ಕೋರೇಗಾಂವ್ ಹಿಂಸೆ ಪೂರ್ವಯೋಜಿತ: ವರದಿ
Team Udayavani, Sep 11, 2018, 5:26 PM IST
ಹೊಸದಿಲ್ಲಿ : ಭೀಮಾ ಕೋರೇಗಾಂವ್ ಹಿಂಸೆಯು ಸಂಚಿನ ಭಾಗವಾಗಿದ್ದು ಅದು ಸಂಪೂರ್ಣವಾಗಿ ಪೂರ್ವ ಯೋಜಿತವಾಗಿತ್ತು ಎಂದು ಘಟನೆಯ ಸತ್ಯ ಶೋಧನೆಗೆ ರೂಪಿಸಲ್ಪಟ್ಟಿದ್ದ 9 ಸದಸ್ಯರ ಸಮಿತಿಯು ಇಂದು ಸಲ್ಲಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಹಿಂಸೆ ಭುಗಿಲೇಳುವ ಮುನ್ನವೇ ಸೀಮೆ ಎಣ್ಣೆ, ದೊಣ್ಣೆಗಳು ಮತ್ತು ತಲವಾರುಗಳು ತುಂಬಿದ್ದ ಟ್ಯಾಂಕರ್ ಗಳನ್ನು ತರಲಾಗಿತ್ತು.ಅಂತೆಯೇ ಭೀಮಾ ಕೋರೆಗಾಂವ್ ಸಮೀಪದ ಸನಸ್ವಾಡಿ ಪ್ರದೇಶದ ಜನರಿಗೆ ಹಿಂಸೆ ಭುಗಿಲೇಳಲಿದೆ ಎಂಬುದು ಖಚಿತವಾಗಿ ಗೊತ್ತಿತ್ತು ಎಂದು ವರದಿ ಹೇಳಿದೆ.
ಈ ಪೂರ್ವ ಯೋಜಿತ ಹಿಂಸೆಯನ್ನು ತಡೆಯಲು ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳದಿದ್ದ ಪೊಲೀಸರ ನಿಷ್ಕ್ರಿಯತೆಯನ್ನು ವರದಿಯು ಖಂಡಿಸಿದೆ.
ಕೇಸರಿ ಧ್ವಜಧಾರಿ ಸಮೂಹವನ್ನು ತಡೆಯುವ ಬದಲು ಆ ಸಮೂಹದೊಂದಿಗೇ ಮಫ್ತಿಯಲ್ಲಿದ್ದ ಪೊಲೀಸರು ಸಾಗುತ್ತಿದ್ದರು ಎಂದೂ ವರದಿ ತಿಳಿಸಿದೆ.
ಪೊಲೀಸರು ಮನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಹಿಂಸೆ ಭುಗಿಲೇಳುವುದನ್ನು ತಪ್ಪಿಸಬಹುದಿತ್ತು ಅಥವಾ ತಡೆಯಬಹುದಿತ್ತು ಎಂದಿರುವ ವರದಿಯು ಹಿಂಸೆ ಭುಗಿಲೇಳಲು ಕಾರಣರಾದ ಇಬ್ಬರು ಬಲಪಂಥೀಯ ನಾಯಕರನ್ನು (ಮಿಲಿಂದ್ ಏಕಬೋಟೆ ಮತ್ತು ಸಂಭಾಜಿ ಭಿಡೆ) ಹೆಸರಿಸಿದೆ.
ಕಳೆದ ಹದಿನೈದು ವರ್ಷಗಳಲ್ಲಿ ಹಿಂಸೆ ಭುಗಿಲೇಳುವಂತಹ ವಾತಾವರಣವನ್ನು ಈ ನಾಯಕರು ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ. ಜಾತಿಯ ನೆಲೆಯಲ್ಲಿ ಈ ನಾಯಕರು ಜನರನ್ನು ವಿಭಜಿಸಲು ಯತ್ನಿಸಿದ್ದಾರೆ ಎಂದೂ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
MUST WATCH
ಹೊಸ ಸೇರ್ಪಡೆ
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ