ತಡೆಯಬಹುದಿದ್ದ ಭೀಮಾ ಕೋರೇಗಾಂವ್ ಹಿಂಸೆ ಪೂರ್ವಯೋಜಿತ: ವರದಿ
Team Udayavani, Sep 11, 2018, 5:26 PM IST
ಹೊಸದಿಲ್ಲಿ : ಭೀಮಾ ಕೋರೇಗಾಂವ್ ಹಿಂಸೆಯು ಸಂಚಿನ ಭಾಗವಾಗಿದ್ದು ಅದು ಸಂಪೂರ್ಣವಾಗಿ ಪೂರ್ವ ಯೋಜಿತವಾಗಿತ್ತು ಎಂದು ಘಟನೆಯ ಸತ್ಯ ಶೋಧನೆಗೆ ರೂಪಿಸಲ್ಪಟ್ಟಿದ್ದ 9 ಸದಸ್ಯರ ಸಮಿತಿಯು ಇಂದು ಸಲ್ಲಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಹಿಂಸೆ ಭುಗಿಲೇಳುವ ಮುನ್ನವೇ ಸೀಮೆ ಎಣ್ಣೆ, ದೊಣ್ಣೆಗಳು ಮತ್ತು ತಲವಾರುಗಳು ತುಂಬಿದ್ದ ಟ್ಯಾಂಕರ್ ಗಳನ್ನು ತರಲಾಗಿತ್ತು.ಅಂತೆಯೇ ಭೀಮಾ ಕೋರೆಗಾಂವ್ ಸಮೀಪದ ಸನಸ್ವಾಡಿ ಪ್ರದೇಶದ ಜನರಿಗೆ ಹಿಂಸೆ ಭುಗಿಲೇಳಲಿದೆ ಎಂಬುದು ಖಚಿತವಾಗಿ ಗೊತ್ತಿತ್ತು ಎಂದು ವರದಿ ಹೇಳಿದೆ.
ಈ ಪೂರ್ವ ಯೋಜಿತ ಹಿಂಸೆಯನ್ನು ತಡೆಯಲು ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳದಿದ್ದ ಪೊಲೀಸರ ನಿಷ್ಕ್ರಿಯತೆಯನ್ನು ವರದಿಯು ಖಂಡಿಸಿದೆ.
ಕೇಸರಿ ಧ್ವಜಧಾರಿ ಸಮೂಹವನ್ನು ತಡೆಯುವ ಬದಲು ಆ ಸಮೂಹದೊಂದಿಗೇ ಮಫ್ತಿಯಲ್ಲಿದ್ದ ಪೊಲೀಸರು ಸಾಗುತ್ತಿದ್ದರು ಎಂದೂ ವರದಿ ತಿಳಿಸಿದೆ.
ಪೊಲೀಸರು ಮನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಹಿಂಸೆ ಭುಗಿಲೇಳುವುದನ್ನು ತಪ್ಪಿಸಬಹುದಿತ್ತು ಅಥವಾ ತಡೆಯಬಹುದಿತ್ತು ಎಂದಿರುವ ವರದಿಯು ಹಿಂಸೆ ಭುಗಿಲೇಳಲು ಕಾರಣರಾದ ಇಬ್ಬರು ಬಲಪಂಥೀಯ ನಾಯಕರನ್ನು (ಮಿಲಿಂದ್ ಏಕಬೋಟೆ ಮತ್ತು ಸಂಭಾಜಿ ಭಿಡೆ) ಹೆಸರಿಸಿದೆ.
ಕಳೆದ ಹದಿನೈದು ವರ್ಷಗಳಲ್ಲಿ ಹಿಂಸೆ ಭುಗಿಲೇಳುವಂತಹ ವಾತಾವರಣವನ್ನು ಈ ನಾಯಕರು ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ. ಜಾತಿಯ ನೆಲೆಯಲ್ಲಿ ಈ ನಾಯಕರು ಜನರನ್ನು ವಿಭಜಿಸಲು ಯತ್ನಿಸಿದ್ದಾರೆ ಎಂದೂ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ