ರೂಪಾಯಿ-ಷೇರು ಕುಸಿತ ; ತೈಲಬೆಲೆ ಜಿಗಿತ
Team Udayavani, Sep 12, 2018, 4:09 PM IST
ಮುಂಬಯಿ: ರೂಪಾಯಿ ಮೌಲ್ಯ ಕುಸಿತ, ತೈಲ ಬೆಲೆ ಏರಿಕೆಯ ಆಘಾತದ ನಡುವೆಯೇ ಷೇರುಪೇಟೆಯ ತಲ್ಲಣ ಮುಂದುವರಿದಿದೆ. ಮಂಗಳವಾರದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 509.04 ಅಂಕಗಳಷ್ಟು ಕುಸಿತ ಕಂಡಿದ್ದು, ವಹಿವಾಟಿನ ಅಂತ್ಯಕ್ಕೆ 37,413.13ಕ್ಕೆ ತಲುಪಿದೆ. ಕಳೆದ ಆರು ತಿಂಗಳಲ್ಲೇ ಇದು ಗರಿಷ್ಠ ಕುಸಿತ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಇನ್ನು, ನಿಫ್ಟಿ 150.60 ಅಂಕ ಇಳಿದು, 11,287.50ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರೂಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲದ ದರ ಏರಿಕೆ ಹಾಗೂ ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರ ಕೂಡ ಸೆನ್ಸೆಕ್ಸ್ ಪಾತಾಳಕ್ಕಿಳಿಯಲು ಕಾರಣ ಎಂದು ಹೇಳಲಾಗಿದೆ.
ರೂ. ಮೌಲ್ಯ ಕುಸಿತ: ಇದೇ ವೇಳೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವೂ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಮಂಗಳವಾರ ಆರಂಭದಲ್ಲಿ ಡಾಲರ್ ಮುಂದೆ 20 ಪೈಸೆಯಷ್ಟು ಏರಿಕೆ ಕಂಡಿತ್ತಾದರೂ, ಅನಂತರ ಕುಸಿಯುತ್ತಾ ದಿನಾಂತ್ಯಕ್ಕೆ 28 ಪೈಸೆಯಷ್ಟು ಇಳಿಕೆಯಾಗಿ, ಒಂದು ಡಾಲರ್ಗೆ ಪ್ರತಿಯಾಗಿ 72.73 ರೂ.ಗಳಿಗೆ ಬಂದು ಮುಟ್ಟಿದೆ.
ಮತ್ತೆ ತೈಲ ಬಿಸಿ: ಕಳೆದ ಹದಿನೈದು ದಿನಗಳಿಂದ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಂಗಳವಾರ 14 ಪೈಸೆಗಳ ಏರಿಕೆ ಕಂಡಿದೆ. ದಿಲ್ಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ಗೆ 80.87 ರೂ., ಡೀಸೆಲ್ಗೆ 72.97 ರೂ. ಆಗಿದೆ. ಮುಂಬೈನಲ್ಲಿ ಪ್ರತಿ ಲೀ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 88.26 ರೂ. ಹಾಗೂ 77.47 ರೂ. ಗಳಿಗೆ ಮುಟ್ಟಿದೆ.
ಪಿಐಎಲ್ ಸಲ್ಲಿಕೆ
ಪ್ರತಿದಿನ ತೈಲ ದರ ಪರಿಷ್ಕರಣೆ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ಗೆ ಪೂಜಾ ಮಹಾಜನ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾ ವಣೆಗೂ ಮುನ್ನ 22 ದಿನಗಳ ಕಾಲ ತೈಲ ಬೆಲೆ ಪರಿಷ್ಕರಿಸಿರಲಿಲ್ಲ. ಬೇಕಾದಾಗ ದೈನಂದಿನ ಬೆಲೆ ಪರಿಷ್ಕರಣೆ ನಿಲ್ಲಿಸಬಹುದಾದರೆ ಈಗ ಅದು ಏಕೆ ಸಾಧ್ಯವಿಲ್ಲ, ತೈಲಗಳ ಮೇಲೆ ಒಂದು ಸ್ಥಿರ ತೈಲ ಬೆಲೆ ನಿಗದಿಗೊಳಿಸಬಾರದೇಕೆ ಎಂದು ಅವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಬುಧವಾರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇಲ್ಲಿ ಪೆಟ್ರೋಲ್ಗೆ 90 ರೂ.!
ಮುಂಬೈನಿಂದ ಪೂರ್ವಕ್ಕೆ 500 ಕಿ.ಮೀ. ದೂರವಿರುವ ಪರ್ಬಾನಿ ಎಂಬ ಊರಿನಲ್ಲಿ ಪೆಟ್ರೋಲ್ ಬೆಲೆ 90 ರೂ.ಗಳ ಗಡಿ ದಾಟಿದೆ. ಕೇವಲ 3,10,000 ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಸೋಮವಾರವೇ ಪೆಟ್ರೋಲ್ ಬೆಲೆ 89.97 ರೂ. ಇತ್ತು. ಇನ್ನು, ಈ ಊರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 77.92 ರೂ.ಗಳಿಂದ 78.06 ರೂ.ಗಳಿಗೆ ಏರಿದೆ.
ಬೆಲೆ ಇಳಿಸಿದ ದೀದಿ
ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಸಿದ ರಾಜ್ಯಗಳ ಪಟ್ಟಿಗೆ ಪಶ್ಚಿಮ ಬಂಗಾಳ ಸೇರ್ಪಡೆಗೊಂಡಿದೆ. ಸಿಎಂ ಮಮತಾ ಬ್ಯಾನರ್ಜಿ ತೈಲಗಳ ಮೇಲಿನ ವ್ಯಾಟ್ ಇಳಿಸಿದ್ದು, ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ