ಗೋವಾ ಸರಕಾರ ರಚನೆಗೆ ಕಾಂಗ್ರೆಸ್ ಯತ್ನ
Team Udayavani, Sep 18, 2018, 7:06 AM IST
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ (62) ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆಯೇ, ಗೋವಾ ಕಾಂಗ್ರೆಸ್ ಸರಕಾರ ರಚನೆಯ ಹಕ್ಕು ಮಂಡಿಸಿದೆ. ಪ್ರತಿಪಕ್ಷ ನಾಯಕ ಚಂದ್ರಕಾಂತ ಕವೆಲೇಕರ್ ನೇತೃತ್ವದ ನಿಯೋಗ ಸೋಮವಾರ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದೆ. ಇನ್ನೊಂದೆಡೆ ತ್ರಿಸದಸ್ಯ ಬಿಜೆಪಿ ನಿಯೋಗ ಗೋವಾ ಸರಕಾರ ಭದ್ರವಾಗಿದೆ ಎಂದು ಹೇಳಿದೆ.
ಕಾಂಗ್ರೆಸ್ ನಿಯೋಗವು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದೆ. ವಿಧಾನಸಭೆಯಲ್ಲಿರುವ ಎಲ್ಲ 16 ಶಾಸಕರು ಇದಕ್ಕೆ ಸಹಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿಕೂಟ ಸರಕಾರ ಅಭದ್ರವಾದರೆ ವಿಧಾನಸಭೆ ವಿಸರ್ಜನೆ ಬೇಡ. ಕಾಂಗ್ರೆಸ್ಗೆ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಜತೆಗೆ, ಮಂಗಳವಾರ ಮತ್ತೆ ರಾಜ್ಯಪಾಲರನ್ನು ಸಂಪರ್ಕಿಸುವುದಾಗಿ ಕವೆÉàಕರ್ ಹೇಳಿದ್ದಾರೆ. ರಾಜ್ಯಪಾಲೆ ಮೃದುಲಾ ಸಿನ್ಹ ಸದ್ಯ ಪ್ರವಾಸದಲ್ಲಿರುವುದರಿಂದ ನಿಯೋಗಕ್ಕೆ ಅವರ ಭೇಟಿ ಸಾಧ್ಯವಾಗಿಲ್ಲ.
“ಬಿಜೆಪಿ ಗೋವಾದಲ್ಲಿ ರಾಜ್ಯಪಾಲರ ಆಡಳಿತ ಹೇರಲು ಬಯಸುತ್ತಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಸದ್ಯ ರಾಜ್ಯದಲ್ಲಿ ಸರಕಾರವೇ ಇಲ್ಲ. ವಿಧಾನಸಭೆಯಲ್ಲಿ ನಮ್ಮದೇ ಅತ್ಯಂತ ದೊಡ್ಡ ಪಕ್ಷ. ಹೀಗಾಗಿ ಸರಕಾರ ರಚನೆಗೆ ಹಕ್ಕು ಮಂಡಿಸುವುದು ನಮ್ಮ ಹಕ್ಕು’ ಎಂದು ಕಾಂಗ್ರೆಸ್ ಶಾಸಕ ಲೂಸಿನೋ ಫೆಲಿರೋ ಹೇಳಿದ್ದಾರೆ.
ಸರಕಾರ ಭದ್ರವಾಗಿದೆ: ಇದೇ ವೇಳೆ ಬಿಜೆಪಿ ವರಿಷ್ಠರಿಂದ ಪ್ರೇಷಿತಗೊಂಡ ಬಿ.ಎಲ್.ಸಂತೋಷ್, ರಾಮ್ ಲಾಲ್ ಮತ್ತು ವಿನಯ ಪುರಾಣಿಕ್ ನೇತೃತ್ವದ ಸಮಿತಿ ಗೋವಾ ಬಿಜೆಪಿ ನಾಯಕರ ಜತೆಗೆ ಸಮಾಲೋಚನೆ ನಡೆಸಿದೆ. ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್, “ರಾಜ್ಯ ಸರಕಾರ ಭದ್ರವಾಗಿದೆ’ ಎಂದು ಹೇಳಿದ್ದಾರೆ. ಈ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಇತರೆ ಕೆಲವು ನಾಯಕರು ಸೋಮವಾರ ಏಮ್ಸ್ಗೆ ಭೇಟಿ ನೀಡಿ ಪಾರೀಕರ್ ಆರೋಗ್ಯ ವಿಚಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್