ಹೈಕಮಾಂಡ್‌ಗೆ “ಕೆಜಿ’ಗಟ್ಟಲೆ ಕಾಸು: ಸಂಭಿತ್‌ ಪಾತ್ರಾ ವಾಗ್ಧಾಳಿ


Team Udayavani, Sep 20, 2018, 6:00 AM IST

x-35.jpg

ಅಕ್ರಮ ಹಣ ಸಾಗಾಟ, ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್‌ ಮುಖಂಡ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ರಾಜಕೀಯವಾಗಿ ಕೆಸರೆರಚಾಟ ಶುರುವಾಗಿದೆ. ಕಾಂಗ್ರೆಸ್‌ ಹವಾಲಾ ದಂಧೆಯಲ್ಲಿ ತೊಡಗಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ವಾಗ್ಧಾಳಿ ನಡೆಸಿದರೆ, ಬಿಜೆಪಿಯವರ ಕುತಂತ್ರಕ್ಕೆ ಹೆದರೋದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಹೊಸದಿಲ್ಲಿ: “ಕರ್ನಾಟಕದ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷ ಹವಾಲಾ ದಂಧೆಯಲ್ಲಿ ತೊಡಗಿಸಿ ಕೊಂಡಿದೆ. ಬೆಂಗಳೂರು ಸಹಿತ ಕರ್ನಾಟಕದ ವಿವಿಧ ಭಾಗಗಳಿಂದ ಎಐಸಿಸಿ ಕೇಂದ್ರ ಕಚೇರಿಗೆ ಹಣವನ್ನು ಸಾಗಿಸಲಾಗಿದೆ’ ಎಂದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯ ಶಿವ ಕುಮಾರ್‌ ವಿರುದ್ಧ ಮಂಗಳವಾರ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿದ ಮಾರನೇ ದಿನವೇ, ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

2017ರಲ್ಲಿ ಬಹಿರಂಗವಾದ ಡೈರಿಯ ವಿವರಗಳ ಬಗ್ಗೆಯೂ ಪ್ರಸ್ತಾವ ಮಾಡಿದ ಸಂಭಿತ್‌, ಈ ಹಿಂದೆ ಅದರಲ್ಲಿ ಕೆಲವೊಂದು ಹೆಸರುಗಳು ಪ್ರಸ್ತಾವವಾಗಿದ್ದವು ಎಂದಿದ್ದಾರೆ. ಸುಮಾರು 600 ಕೋಟಿ ರೂ. ಲಂಚ ಎಸ್‌ಜಿ ಆಫೀಸ್‌, ಆರ್‌ಜಿ ಆಫೀಸ್‌ಗೆ ನೀಡಲಾಗಿದೆ ಎಂದು ಬರೆಯಲಾಗಿತ್ತು. ಎಸ್‌ಜಿ ಎಂದರೆ ಸೋನಿಯಾ ಗಾಂಧಿ. ಆರ್‌ಜಿ ಎಂದರೆ ರಾಹುಲ್‌ ಗಾಂಧಿ. ಆದರೆ ಈಗ ಈ ಎಲ್ಲ ಅಂಶಗಳನ್ನೂ ಜೋಡಿಸುವ ಸಮಯ ಬಂದಿದೆ. ಅದಕ್ಕೆ ಪೂರಕ ಸಾಕ್ಷಿ ನಮ್ಮ ಬಳಿ ಇದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಂತ ಪ್ರಮುಖರಾಗಿದ್ದಾರೆ ಎಂದು ಪಾತ್ರಾ ಹೇಳಿದರು. ಜತೆಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಶಿವಕುಮಾರ್‌ರ ಕಾರು ಚಾಲಕ ಹನುಮಂತಯ್ಯ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯ ಸಾರಾಂಶವನ್ನೂ ಬಿಜೆಪಿ ಬಹಿರಂಗಪಡಿಸಿದೆ. ಕರ್ನಾಟಕದ ಆಗಿನ ಪ್ರಮುಖ ಅಧಿಕಾರಿಗಳಾದ ಆಂಜನೇಯ ಹನುಮಂತಯ್ಯ, ಎನ್‌. ರಾಜೇಂದ್ರನ್‌, ಡ್ರೈವರ್‌ ಜಗದೀಶ್‌ ದಿಲ್ಲಿಯಲ್ಲಿ ಹೊಂದಿದ್ದ ಮನೆಗಳ ಮೇಲೆಯೂ ದಾಳಿ ನಡೆದಿತ್ತು. 

ಆಂಜನೇಯ ಮನೆ ಆರ್‌.ಕೆ. ಪುರದಲ್ಲಿದ್ದು, ಇದು ಸರಕಾರಿ ನಿವಾಸವಾಗಿತ್ತು. ಅವರ ನಿವಾಸದಲ್ಲಿ ಸಫ‌ªರ್‌ಜಂಗ್‌ ಹಾಗೂ ಕೃಷ್ಣ ನಗರದಲ್ಲಿನ ಮೂರು ಫ್ಲ್ಯಾಟ್‌ಗಳ ಕೀ ಸಿಕ್ಕಿತ್ತು. ಈ ಮೂರು ಫ್ಲ್ಯಾಟ್‌ನಿಂದ 8 ಕೋಟಿ ಹಣ ಸಿಕ್ಕಿತ್ತು ಎಂದು ಸಂಭಿತ್‌ ಪಾತ್ರಾ ಆರೋಪಿಸಿದರು.

ತಪ್ಪೊಪ್ಪಿಗೆ ಹೇಳಿಕೆ ಪ್ರಸ್ತಾವ
ಬಿಜೆಪಿ ನಾಯಕ ಸಂಭಿತ್‌ ಪಾತ್ರಾ ಸಚಿವ ಡಿ.ಕೆ.ಶಿವಕುಮಾರ್‌ ಕಾರು ಚಾಲಕ ಹನುಮಂತಯ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವಿಚಾರಣೆ ವೇಳೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಓದಿದ್ದಾರೆ. ಅದರಲ್ಲಿ “ಅಂದಾಜು 4 ಕೋಟಿ ರೂ. ಅನ್ನು ನನಗೆ ಖನ್ನಾ ನೀಡಿದ್ದರು. ಅದನ್ನು ನಾನು ಡಿಕೆಶಿ ಸೂಚನೆಯ ಮೇರೆಗೆ ಹಸ್ತಾಂತರ ಮಾಡಿದ್ದೆ. ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಬಂದಾಗ ನನ್ನನ್ನು ಅವರ ಸಹಾಯಕರನ್ನಾಗಿ ನೇಮಿಸಲಾಗುತ್ತಿತ್ತು. ಅವರಿಗೆ ಸಂಬಂಧಿಸಿದ ಹಣವನ್ನು ನಾನು ನಿರ್ವಹಿಸುತ್ತಿದ್ದೆ. ಶಿವಕುಮಾರ್‌ ಆದೇಶವಾದಾಗೆಲ್ಲ ಹಣವನ್ನು ಸಂಗ್ರಹಿಸಿ ಸಫ‌ªರ್‌ಜಂಗ್‌ನ ಫ್ಲ್ಯಾಟ್‌ಗಳಲ್ಲಿಡುತ್ತಿದ್ದೆ ಮತ್ತು ಅವರ ಆದೇಶವಿದ್ದಾಗ ಅದನ್ನು ಸಂಬಂಧಿತ ವ್ಯಕ್ತಿಗಳಿಗೆ ನೀಡುತ್ತಿದ್ದೆ. ಈ ವಹಿವಾಟುಗಳು ಇಡೀ ವರ್ಷ ನಡೆದಿತ್ತು. ನನಗಿಂತ ಮೊದಲು ರಾಜೇಂದ್ರನ್‌ ಈ ವಹಿವಾಟು ನಡೆಸುತ್ತಿದ್ದರು’ ಎಂದು ಅದರಲ್ಲಿ ದಾಖಲಾಗಿದೆ.

ಡ್ರೈವರ್‌ ತಪ್ಪೊಪ್ಪಿಗೆ ಹೇಳಿಕೆ
ಬೆಂಗಳೂರಿನಿಂದ ಡಿಕೆಶಿ ತಂದ ಹಣವನ್ನು ಚಾಂದನಿ ಚೌಕ್‌ಗೆ ತೆಗೆದುಕೊಂಡು ಹೋಗಿ, ಅದನ್ನು ಅನಂತರ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದೆ. ಇದು ಕೆ.ಜಿ.ಗಳಲ್ಲಿರುತ್ತಿತ್ತು. ಆಂಜನೇಯ ಹನುಮಂತಯ್ಯ ಜತೆಗೆ ನಾನು ಹೋಗುತ್ತಿದ್ದೆ. ಸಾಮಾನ್ಯ ಬ್ಯಾಗ್‌ಗಳಲ್ಲಿಯೇ ನಾವು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದರು.

ಜಪ್ತಿ ಮಾಡಿದ ಹಣವು ಹವಾಲಾ ವಹಿವಾಟಿನದ್ದಾಗಿದೆ. ಕೆಜಿ ಎಂಬ ಕೋಡ್‌ವರ್ಡ್‌ ನಲ್ಲಿ ಸಾಗಿಸಲಾಗುತ್ತಿತ್ತು. ಇಲ್ಲಿ ಕೆಜಿ ಎಂದರೆ ಲಕ್ಷ ಎಂದರ್ಥ. ದಾಖಲೆಗಳ ಪ್ರಕಾರ 65 ಕೆಜಿ ಮೊತ್ತ ಎಐಸಿಸಿ ಕಚೇರಿಗೆ ಸಂದಾಯವಾಗಿದೆ ಎಂದು ಸಂಭಿತ್‌ ಹೇಳಿದ್ದಾರೆ.

ಕೋಟಿಗಟ್ಟಲೆ ಹಣ ಕಳವು
ಒಮ್ಮೆ ಈ ಸಫ‌ªರ್‌ಜಂಗ್‌ ಫ್ಲ್ಯಾಟ್‌ನಲ್ಲಿ ಕೋಟಿಗಟ್ಟಲೆ ಹಣ ಕಳವಾಗಿತ್ತು. ಆದರೆ ಈ ಬಗ್ಗೆ ಎಫ್ಐಆರ್‌ ದಾಖಲಿಸಲು ಕಾಂಗ್ರೆಸ್‌ ಮುಂದಾಗಲಿಲ್ಲ. ಬದಲಿಗೆ ತಾನೇ ತನಿಖೆ ನಡೆಸಿತ್ತು. ಇದು ಜಗದೀಶ್‌ ಚಂದ್‌ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ದಾಖಲಾಗಿದೆ. ಜಗದೀಶ್‌ ಚಂದ್‌ರನ್ನೂ ಸಫ‌ªರ್‌ಜಂಗ್‌ನ ಫ್ಲ್ಯಾಟ್‌ಗೆ ಕರೆಸಿ ಈ ಬಗ್ಗೆ ವಿಚಾರಣೆ ಮಾಡಲಾಗಿತ್ತು. ವಿಚಾರಣೆ ನಡೆಸಿದವರು ಸಮವಸ್ತ್ರ ಧರಿಸಿರಲಿಲ್ಲ. ಅವರು ಪೊಲೀಸರಂತೆ ಕಾಣಿಸುತ್ತಿದ್ದರು ಎಂದು ಜಗದೀಶ್‌ ಚಂದ್‌ ಹೇಳಿದ್ದ ವಿಚಾರವನ್ನು ಪಾತ್ರಾ ಪ್ರಸ್ತಾವಿಸಿದ್ದಾರೆ.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.